ಬೆಳಗಾವಿ : ಬೆಳಗಾವಿ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿದ್ದು ಟಿಕೆಟ ಸಿಗದ ಕೆಲವು ನಾಯಕರು ಬಿಜೆಪಿ ವಿರುದ್ದ ಬಂಡಾಯ ಎದ್ದಿದ್ದಾರೆ.
ಅಥಣಿ ಕ್ಷೇತ್ರದಲ್ಲಿ ಸವದಿ ಬಿಜೆಪಿ ವಿರುದ್ಧ ಬಂಡಾಯ ಎಂದಿದ್ದು ಬೆಳಗಾವಿ ಉತ್ತರದಲ್ಲಿ ಅನಿಲ ಬೆನಕೆ ಟಿಕೆಟ್ ಸಿಗದ ಕಾರಣ ಬಿಜೆಪಿ ವಿರುದ್ಧ ಬಂಡಾಯ ಏಳುವ ಎಲ್ಲ ತರಹ ಲಕ್ಷಣಗಳು ಎದ್ದು ಕಾಣುತ್ತಿವೆ.
ಇಂದು ಬೆಳಗಾವಿಯ ಡಾ.ಅಂಬೇಡ್ಕರ ಉದ್ಯಾನದಲ್ಲಿ ನಡೆದ ಡಾ.ಅಂಬೇಡ್ಕರವರ ಜಯಂತಿಯಲ್ಲಿ ಫಿರೋಜ್ ಶೇಠ ಮತ್ತು ಬೆನಕೆ ಇಬ್ಬರು ಕೂಡಿ ಅಂಬೇಡ್ಕರ ಉದ್ಯಾನವನಕ್ಕೆ ಬಂದಿದ್ದು ಹೊಸ ಸಂಚಲನ ಮೂಡಿಸಿದೆ.