
10:30 ಆದರೂ ಸರ್ಕಾರಿ ಕಚೇರಿ ಖಾಲಿ ಖಾಲಿ: ಡಿಸಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡ ಸಚಿವ ಬೈರೇಗೌಡ!
ಬೆಂಗಳೂರು ಗ್ರಾಮೀಣ ಜಿಲ್ಲಾಧಿಕಾರಿಯೊಂದಿಗೆ ಸ್ಥಳದಿಂದಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವ ಕೃಷ್ಣ ಬೈರೇಗೌಡರು, ಬೆಳಗ್ಗೆ 10.15ರವರೆಗೆ ಕಚೇರಿಗೆ ಆಗಮಿಸದ ಸಬ್ ರಿಜಿಸ್ಟ್ರಾರ್ ಮತ್ತು ಎಫ್ಡಿಎ ಅಧಿಕಾರಿಗಳ ಕುರಿತು ಗಂಭೀರವಾಗಿ ವಿಚಾರಣೆ ನಡೆಸಿದರು.

ಉಪ ವಿಭಾಗಾಧಿಕಾರಿ ಕಚೇರಿಯ ಕೇಸ್ ವರ್ಕರ್ ಚೇತನ್ ವಿರುದ್ಧ ದೂರು

ಸಚಿವರು ಉಪ ವಿಭಾಗಾಧಿಕಾರಿ ಕಚೇರಿಯ ಕೇಸ್ ವರ್ಕರ್ ಚೇತನ್ ವಿರುದ್ಧ ಭ್ರಷ್ಟಾಚಾರದ ಆರೋಪದ ಬಗ್ಗೆ ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.ಯಾವ ಕೆಲಸಕ್ಕೆ ಎಷ್ಟು ರೇಟು? ಯಾವ ಅಧಿಕಾರಿಯ ಪಾಲೆಷ್ಟು? ರೇಟ್ ಕಾರ್ಡ್ ಹಾಕಿಬಿಡಿ!ಎಂದು ಪ್ರಶ್ನಿಸಿದ ಅವರು, ಈ ಅವ್ಯವಹಾರದ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಮಯಪಾಲನೆ ಮತ್ತು ಅಧಿಕಾರಿಗಳ ಕಾರ್ಯಚಟುವಟಿಕೆಗಳ ಕುರಿತು ಕಟುವಾಗಿ ಮಾತನಾಡಿದ ಸಚಿವರು, ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ನಿರ್ವಹಣೆಗಾಗಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗೆ ಮಹತ್ವವನ್ನು ನೀಡಲು ಸೂಚಿಸಿದರು. ಕಚೇರಿಯ ವೇಳಾಪಟ್ಟಿಗೆ ತಕ್ಕಂತೆ ಅಧಿಕಾರಿಗಳು ಹಾಜರಾಗದೇ ಇರುವುದು ಜನಸಾಮಾನ್ಯರ ಸೇವೆಗಳಿಗೆ ಅಡ್ಡಿಯಾಗಿದೆ ಎಂದು ಸಚಿವರು ಕಟುವಾಗಿ ಹೇಳಿದರು.
ಈ ವಿಚಾರಣೆ ನಂತರ, ಸಚಿವರು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಕಚೇರಿಯ ಸಮರ್ಥ ಕಾರ್ಯಾಚರಣೆಗಾಗಿ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದರು.