17 ನೇ ಶತಮಾನದ ರಾಣಿಯ ಅವಶೇಷ ಉಡುಗೊರೆಯಾಗಿ ನೀಡಿದ ಭಾರತ
ಜಾರ್ಜಿಯಾ:ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಶುಕ್ರವಾರ ಸೇಂಟ್ ಕ್ವೀನ್ ಕೆಟೆವಾನ್ ಅವರ ಪವಿತ್ರ ಅವಶೇಷವನ್ನು ಜಾರ್ಜಿಯಾ ಸರಕಾರಕ್ಕೆ ಹಸ್ತಾಂತರಿಸಿದ್ದಾರೆ.
A moving ceremony. EAM @DrSJaishankar hands over the holy relics of St Queen Ketevan to Georgian FM @DZalkaliani. Here are a few glimpses- @MEAIndia @MFAgovge @IndianDiplomacy pic.twitter.com/K8oYNuBbme
— India in Armenia & Georgia (@IndiainArmenia) July 9, 2021
ಜೈಶಂಕರವರು ಮಾಸ್ಕೋದಿಂದ ಶುಕ್ರವಾರ ಜಾರ್ಜಿಯಾವನ್ನು ತಲುಪಿದರು. ಈ ಅವಶೇಷದ ಒಂದು ಭಾಗವನ್ನು ಭಾರತೀಯ ಸರ್ಕಾರವು ಉಡುಗೊರೆಯಾಗಿ ಜಾರ್ಜಿಯಾ ಸರ್ಕಾರಕ್ಕೆ ಹಸ್ತಾಂತರಿಸಿದೆ ಮತ್ತು ಇದು ಭಾವನಾತ್ಮಕ ಮತ್ತು ಐತಿಹಾಸಿಕ ಮೌಲ್ಯದಿಂದಾಗಿ ಜಾರ್ಜಿಯಾ ಸರ್ಕಾರದ ದೀರ್ಘಕಾಲದ ಕೋರಿಕೆಯಾಗಿತ್ತು.
ಸೇಂಟ್ ಕ್ವೀನ್ ಕೆಟೆವಾನ್ 17 ನೇ ಶತಮಾನದ ಜಾರ್ಜಿಯನ್ ರಾಣಿಯಾಗಿದ್ದು, ಮಧ್ಯಕಾಲೀನ ಪೋರ್ಚುಗೀಸ್ ದಾಖಲೆಗಳ ಆಧಾರದ ಮೇಲೆ 2005 ರಲ್ಲಿ ಭಾರತದ ಓಲ್ಡ್ ಗೋವಾದ ಸೇಂಟ್ ಅಗಸ್ಟೀನ್ ಕಾನ್ವೆಂಟ್ನಲ್ಲಿ ಆಕೆಯ ಅವಶೇಷಗಳು ಕಂಡುಬಂದಿವೆ.
ಅವರನ್ನು 1627 ರಲ್ಲಿ ಗೋವಾಕ್ಕೆ ಕರೆತರಲಾಗಿತ್ತು ಮತ್ತು ಸೇಂಟ್ ಅಗಸ್ಟೀನ್ ಕಾಂಪ್ಲೆಕ್ಸ್ನಲ್ಲಿ ಸಮಾಧಿ ಮಾಡಲಾಗಿದೆ ಎಂದು ನಂಬಲಾಗಿದೆ.
ಭಾರತದ ಪುರಾತತ್ವ ಸಮೀಕ್ಷೆಯ ಸಂದರ್ಭದಲ್ಲಿ ಹೈದರಾಬಾದ್ನ ಸಿಎಸ್ಐಆರ್-ಸೆಲ್ಯುಲರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರವು ಡಿಎನ್ಎ ವಿಶ್ಲೇಷಣೆಯನ್ನು ನಡೆಸಿ ಅದರ ಸತ್ಯಾಸತ್ಯತೆಯನ್ನು ದೃಡಪಡಿಸಿತು.