ಸರಕಾರದ ವಿರುದ್ಧ ಬಾರಕೋಲ್ ಚಳುವಳಿಗೆ ಮುಂದಾದ ರೈತಾಪಿ ವರ್ಗ
ಬೆಳಗಾವಿ : ಚಳಿಗಾಲದ ಅಧಿವೇಶನ ಹಿನ್ನೆಲೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾದ ರೈತರು ಸರ್ಕಾರದ ವಿರುದ್ಧ ಅನ್ನದಾತರ ಬಾರಕೋಲ ಚಳುವಳಿ ಮುಂದುವರಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದ ಬಾರಕೋಲ ಚಳುವಳಿ ನಡೆಸಿದೆ. ರಾಜ್ಯದ ನಾನಾ ಭಾಗದಿಂದ ರೈತರು ಆಗಮಿಸಿ ಜಮೆಗೊಂಡಿದ್ದಾರೆ.
ಕೈಯಲ್ಲಿ ಬಾರಕೋಲ ಹಿಡುದು, ಹಲಗಿ ಬಾರಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 10.30 ಕ್ಕೆ ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನ ಸೌಧದ ವರೆಗೂ ಬಾರಕೋಲ ಚಳುವಳಿ ಬೆಳಗಾವಿಯಲ್ಲಿ 144 ಸೆಕ್ಷನ್ ಜಾರಿ ಇರುವುದರಿಂದ ಚನ್ನಮ್ಮ ವೃತ್ತದಲ್ಲಿಯೇ ರೈತರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ.