ದೇವಗಿರಿ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸುವಂತೆ ಒತ್ತಾಯ
ಬೆಳಗಾವಿ: ತಾಲೂಕಿನ ದೇವಗಿರಿ ಗ್ರಾಮದ ಸ್ಮಶಾನ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಸೋಮವಾರ ದೇವಗಿರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ದೇವಗಿರಿ ಗ್ರಾಮವು ಸುಮಾರು ಮೂರು ಸಾವಿರ ಜನಸಂಖ್ಯೆ ಹೊಂದಿದ್ದು, 80% ಲಿಂಗಾಯತ, 15% ನಾಯಿಕ ಹಾಗೂ 5% ಇನ್ನುಳಿದ ಸಮುದಾಯ ವಾಸಿಸುತ್ತಿದ್ದಾರೆ.
ಜಮೀನು ದರ ಹೆಚ್ಚಿಗೆಯಾಗಿರುವುದರಿಂದ ಕೆಲವರು ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಪರ್ಯಾಯ ಸ್ಮಶಾನ ಜಾಗೆ ನೀಡಬೇಕೆಂದು ಆಗ್ರಹಿಸಿದರು. ರಾಮಪ್ಪ ಚುರುಮರಿ, ರಾಜು ಸುತಾರ, ಶ್ರೀದೇವಿ ಪಾಟೀಲ ಮಲಗೌಡ ಪಾಟೀಲ ಸೇರಿದಂತೆ ಹಲವಾರು ಹಾಜರಿದ್ದರು.