ಮುಂದೆ ಬರಲಿರುವ ಚುನಾವಣೆಗಳಲ್ಲಿ ರಾಷ್ಟ್ರೀಯ ಸಮಾಜ ಪಕ್ಷ ಸ್ಪರ್ಧೆ ನಡೆಸಲಿದೆ: ಮಹಾದೇವ ಜಾಣಕರ
ಬೆಳಗಾವಿ: ರಾಜ್ಯದಲ್ಲಿನ ಮೂರು ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಯಾವುದೇ ಬದಲಾವಣೆ ಆಗಿಲ್ಲ ಆದ್ದರಿಂದ ಈ ಬಾರಿ ಮುಂದೆ ಬರುವ ಪ್ರತಿಯೊಂದು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಾಗುವುದು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಹಾರಾಷ್ಟ್ರ ಎಂ.ಎಲ್.ಸಿ ಮಹಾದೇವ ಜಾಣಕರ ದೇಶದಲ್ಲಿ ಬಿಜೆಪಿ ಸರಕಾರದಲ್ಲಿ ಆಗಿರುವ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಹಾಗೇ ಯಾವುದೇ ರೀತಿಯಲ್ಲಿ ದೇಶ ಬದಲಾವಣೆ ಆಗಿಲ್ಲ ಆದ್ದರಿಂದ ನಮ್ಮ ಪಕ್ಷದ ವತಿಯಿಂದ ದೇಶದಲ್ಲಿ ಎನಾದರೂ ಬದಲಾವಣೆ ತರುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ತಿಳಿಸಿದರು.
ಹಾಗೇಯೆ ಈ ಸಂದರ್ಭದಲ್ಲಿ ಸಿದ್ದಪ್ಪ ಅಕ್ಕಿಸಾಗರ ರಾಷ್ಟ್ರೀಯ ಸಮಾಜ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರು, ಧರ್ಮಣ್ಣ ತೊಂಟಾಪುರ ರಾಜ್ಯದ ಕೋವಾರ್ಡಿನೇಟರ್ ಇನ್ನು ಹಲವು ರಾಷ್ಟ್ರೀಯ ಸಮಾಜ ಪಾರ್ಟಿ ಮುಖಂಡರು ಉಪಸ್ಥಿತರಿದ್ದರು.