ಸುವರ್ಣ ಸೌದದಲ್ಲಿ ಕರ್ನಾಟಕ ಮಾಹಿತಿ ಆಯೋಗ ಕಾರ್ಯಾರಂಭ

ಬೆಳಗಾವಿ: ಸರ್ಕಾರ ಯಾವ ಉದ್ದೇಶಕ್ಕಾಗಿ ಸುವರ್ಣ ಸೌದ ಉತ್ತರ ಕರ್ನಾಟಕ ದಲ್ಲಿ ಕಟ್ಟಿಸಿದ್ದಾರೊ ಎಂಬ ಪ್ರಶ್ನೆ? ಪ್ರತಿಯೊಬ್ಬರಲ್ಲು ಇರುತ್ತದೆ ಕೇವಲ ಚಳಿಗಾಲ ಅಧಿವೇಶನ ಮಾಡಿ ಕೈ ತೊಳಿಯುತ್ತಿದ್ದ ಸರ್ಕಾರ ಇಗ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಮತ್ತು ಸರ್ಕಾರದ ಆಶಯದಂತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠವು ಕಾರ್ಯಾರಂಭಿಸಿದೆ.
ಈ ಕುರಿತು ಶುಕ್ರವಾರ (ಜೂ.19) ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಗೀತಾ ಬಿ.ವಿ. ಅವರು, ಆಯೋಗದ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ ಜೂ.22 ರಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಿಸಿದರು. ಆಯೋಗ ಕೊರೋನಾ ಕಾರಣದಿಂದ ಬಹಳ ವಿಳಂಬ ವಾಗಿ ಸುವರ್ಣಸೌದಕ್ಕೆ ಮಾಹಿತಿ ಆಯೋಗ ಕಾರ್ಯಾರಂಭ ಮಾಡಲಿದೆ.

ಉತ್ತರ ಕರ್ನಾಟಕದ ಜನರ ಆಶೋತ್ತರದಂತೆ ಹಾಗೂ ರೈತರರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಸುವರ್ಣ ವಿಧಾನಸೌಧದಲ್ಲಿ ಕಾರ್ಯ ಕಲಾಪ ಆರಂಭಿಸಲಾಗುತ್ತಿದೆ. ಉತ್ತರ ಕರ್ನಾಟಕದ ಜನರ ಬಹುದಿನಗಳ ಕನಸು ಇಗ ನನಾಸಗಿದೆ .
ಪೀಠದ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿದೆ ಎಂದು ಆಯೋಗದ ಆಯುಕ್ತರಾದ ಗೀತಾ ಬಿ.ವಿ. ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ಅಧ್ಯಕ್ಷರಿಗೆ ಆಯುಕ್ತರು ಕೃತಜ್ಞತೆ ಸಲ್ಲಿಸಿದರು.
ಮಾಹಿತಿ ಆಯೋಗದ ಬೆಳಗಾವಿ ಪೀಠದ ವ್ಯಾಪ್ತಿಯಲ್ಲಿ ಏಳು ಜಿಲ್ಲೆಗಳು ಬರಲಿದ್ದು, ಒಟ್ಟು ನಾಲ್ಕು ಸಾವಿರ ಪ್ರಕರಣಗಳು ಬಾಕಿ ಉಳಿದಿದೆ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಳಿದಿವೆ ಎಂದು ಆಯುಕ್ತರಾದ ಗೀತಾ ಬಿ‌.ವಿ. ತಿಳಿಸಿದರು.

promotions

Read More Articles