ರೈತನೋರ್ವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
- 15 Jan 2024 , 1:45 AM
- Belagavi
- 187
5 ತಿಂಗಳ ಹಿಂದೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಂಡತಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ನಂತರ ಹೊಲದಲ್ಲಿ ಕಷ್ಟಪಟ್ಟು ತರಕಾರಿ ಬೆಳೆದಿದ್ದರು. ಕೊರೊನಾದಿಂದಾಗಿ ಅದು ಮಾರಾಟ ಆಗದೆ ಹೊಲದಲ್ಲಿ ಕೊಳೆತು ಹೋಗಿತ್ತು. ಇಷ್ಟೇಲ್ಲಾ ಆದರು ಮತ್ತೆ ಈಗ ಹೊಲದಲ್ಲಿ ಆಲೂಗಡ್ಡೆ, ಸಬ್ಬಸಗಿ ಮತ್ತು ಕ್ಯಾಬಿಸ್ ಬೆಳೆ ಹಾಕಿದ್ದರು. ಆದರೆ ವಾರದ ಹಿಂದೆ ಸತತ ಸುರಿದ ಮಳೆಯಿಂದಾಗಿ ಮೂರು ಬೇಳೆ ಕೈ ಕೊಟ್ಟವು. ಇದರಿಂದ ಸತತ ಆರ್ಥಿಕವಾಗಿ ಹದೆಗಟ್ಟ ಪರಿಸ್ಥಿತಿಗೆ ಕಂಗೆಟ್ಟು ಹೊಲದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಘಟನೆ ಕುರಿತು ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











