ಬಿಜೆಪಿಯಿಂದ ಬೀದಿ ಬೀದಿಗೆ ಸ್ಯಾನಿಟೈಸರ್
- 30 Dec 2023 , 11:53 AM
- Belagavi
- 131
ಬೆಳಗಾವಿ: ಮಹಾಮಾರಿ ಕರೊನಾ 2 ನೇ ಅಲೆಯಲ್ಲಿ ಸಂಕಷ್ಟಕ್ಕೆ ಸಿಕ್ಕ ಜನತೆಗೆ 3 ನೇ ಅಲೆಯ ಭಯ ಕಾಡುತ್ತಿದೆ. ಈ ಅಲೆ ಬರುವ ಮುಂಚಿತವಾಗಿ ಗ್ರಾಮಗಳ ಬೀದಿ ಬೀದಿಗಳಲ್ಲಿ ಸೆನಿಟೈಜರ್ ಮಾಡುವ ಮೂಲಕ 3 ನೇ ಅಲೆಯ ಕರೊನಾ ತಡೆಗಟ್ಟಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯದೊಂದಿಗೆ.

ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಸೇವಾ ಹೀ ಸಂಘಟನೆ ಅಟಿಯಲ್ಲಿ ಗ್ರಾಮೀಣ ಮತಕ್ಷೇತ್ರದ ಹಳ್ಳಿಗಳಲ್ಲಿ ಉಚಿತವಾಗಿ ಸೆನಿಟೈಜರ್ ಹಾಗೂ ಸಿಂಪರಣೆಗೆ ವಾಹನ ನೀಡಿ ಸ್ವತಃ ಸಿಂಪರಣೆ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿ ಗ್ರಾಮೀಣ ಪ್ರದೇಶದ ಜನಸಾಮನ್ಯರು ಕರೊನಾ 3 ನೆ ಅಲೆಯಿಂದ ಸುರಕ್ಷಿತವಾಗಿರಲು ಕೈಗೊಂಡ ಈ ಕ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.











