ಕೋವಿಡ್ ಔಷಧಿ ವಿತರಣೆ ಮಾಡಿದ ಬಿಜೆಪಿ ಮಂಡಳ ಕಾರ್ಯಕರ್ತರು
- 14 Jan 2024 , 10:53 PM
- Belagavi
- 115
ಖಾನಾಪುರ: ಪಾರಿಶ್ವಾಡ ಗ್ರಾಮದಲ್ಲಿ ಬಿಜೆಪಿ ಖಾನಾಪುರ ಮಂಡಳ ಹಾಗೂ ಡಾ॥ ಸಂಜೀವ ಕುಲಕರ್ಣಿ ಸಂಚಾಲಕರು ವೈದ್ಯಕೀಯ ಪ್ರಕೋಷ್ಠ ಇವರ ಆಶ್ರಯದಲ್ಲಿ ಕೋವಿಡ-19 ರೋಗನಿರೋಧಕ ಔಷಧಿ ಕಿಟ್ ವಿತರಣೆ ಮಾಡಲಾಯಿತು : ವಿಟಮಿನ್ ಸಿ ಮಾತ್ರೆಗಳು, ಆರ್ಸನಿಕ್ ಆಲ್ಬಂ ಹೋಮಿಯೋಪತಿ ಮಾತ್ರೆಗಳು, ಇಮ್ಯುನಿಟಿ ಬೂಸ್ಟರ್ ಡ್ರಾಪ್ಸ್ ಆಯುರ್ವೇದ ಔಷಧಿ. ಕನ್ನೇರಿಮಠದ ಇಮ್ಯುನಿಟಿ ಬೂಸ್ಟರ್ ಔಷಧಿಯನ್ನು ವಿತರಿಸಲಾಯಿತು.


ಡಾಕ್ಟರ್ ಸಂಜೀವ ಕುಲಕರ್ಣಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕರು ಡಾ॥ ಗುರು ಕೋತಿನ, ಸಂಚಾಲಕರು ಖಾನಾಪೂರ ಮಂಡಳದ ಅಧ್ಯಕ್ಷರಾದ ಸಂಜಯ ಕುಬಲ, ಪ್ರಮೋದ ಕಚೇರಿ, ಶ್ರೀ ವಿಠ್ಠಲ ಹಲಗೇಕರ, ಶ್ರೀ ಸುಭಾಸ ಗುಳಶೆಟ್ಟಿ. ಜಿಲ್ಲಾ ವಕ್ತಾರರಾದ ಸಂಜಯ ಕಂಚಿ, ಗುಂಡು ತೋಪಿನಕಟ್ಟಿ ಸುರೇಶ ದೇಸಾಯಿ, ಬಸವರಾಜ ನಿಂಬಾಳ್ಕರ , ಕರವೇ ದಶರಥ ಬನೋಶಿ. ದರ್ಶನ ಕಿಲಾರಿ, ಸಿದ್ಧು ಪಾಟೀಲ, ಮಾರುತಿ ಉಮ್ಮನಗೊಳ, ಹನುಮಂತ ವಸಂತ ಕೊಲಕಾರ ಹಾಗೂ ಪಾರಿಶ್ವಾಡ ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಉಪಸ್ಥಿತರಿದ್ದರು. ಶ್ರೀ ನಾಗೇಂದ್ರ ಚೌಗಲಾ. ಅಧ್ಯಕ್ಷರು ಕೆ ಆರ್ ಡಿ ಎಸ್ ನಿರೂಪಿಸಿದರು.











