ಮಹಾಂತ ವಕ್ಕುಂದ ಫೌಂಡೇಶನ್ ಬೆಳಗಾವಿ ಅವರಿಂದ ಮಳೆಯಲ್ಲಿಯು ಸಮಾಜ ಕಾಯಕ
- 30 Dec 2023 , 11:59 AM
- Belagavi
- 118
ಬೆಳಗಾವಿ :ನಗರದಲ್ಲಿ ಕಳೆದೆರಡು ದಿನಗಳಿಂದ ಎಗ್ಗಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೂ ಸಹ ಜಿಲ್ಲಾಸ್ಪತ್ರೆಯಲ್ಲಿ ಅನ್ನ ನೀಡುವ ಕಾಯಕವನ್ನು ಮಹಾಂತ ವಕ್ಕುಂದ ಪೌಡೇಶನದವರು ಸದ್ದಿಲ್ಲದೇ ಮುಂದೆ ಸಾಗಿಸುತ್ತಿದ್ದಾರೆ.

ಇದು 43 ನೇ ದಿನದ ಸೇವಾ ಕಾರ್ಯವನ್ನು ಸಹ ಧಾರಾಕಾರವಾಗಿ ಸುರಿಯುವತ್ತಿರುವ ಮಳೆಯ ನಡುವೆ ಆಸ್ಪತ್ರೆಗೆ ಬಂದ ಬಡ ಜೀವಗಳಿಗೆ ಕೈ ತುತ್ತು ನೀಡಿ ತಮ್ಮ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.ಇನ್ನೊಂದಡೆ ಲಾಕ್ ಡೌನ ಆರಂಭದಿಂದಲೂ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿ.ಸಂಕಷ್ಟ ಸ್ಥಿತಿ ಅನುಭವಿಸುತ್ತಿರುವ ಜೀವಗಳಿಗೆ ಆಧಾರವಾಗಿ ವಕ್ಕುಂದ ಪೌಡೇಶನ ಕೆಲಸದಲ್ಲಿ ನಿರತವಾಗಿದೆ.

ಇನ್ನೂ ಬೆಳಗಾವಿಯಲ್ಲಿ ಲಾಕ್ ಡೌನ ತೆರವಾಗುವವರೆಗೂ ನಮ್ಮ ಅನ್ನ ಸಂತರ್ಪಣಾ ಕಾರ್ಯ ಮುಂದುವರಿಯುತ್ತಿದೆ ಎಂದು ಮಹಾಂತೇಶ ವಕ್ಕುಂದ ಪೌಡೇಶನ ತಿಳಿಸಿದೆ










