ಕೊವೀಡ್ ಸಂಕಷ್ಟ ಪರಿಸ್ಥಿತಿಯಲ್ಲಿ ನೊಂದವರಿಗೆ ಆಹಾರ ಕಿಟ್ ವಿತರಣೆ: ಬಿಜೆಪಿ ಮುಖಂಡ ದರ್ಶನ ಕಿಲಾರಿ ನೇತೃತ್ವದಲ್ಲಿ ವಿತರಣೆ
- 15 Jan 2024 , 2:51 AM
- Belagavi
- 124
ಖಾನಾಪುರ: ಇಲ್ಲಿಯ ಒನ್ ನೇಷನ್ ಯೂಥ್ ಸಂಸ್ಥೆ ಹಾಗೂ ಮುದ್ದೇನಹಳ್ಳಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ನೀಡಲಾದ ಆಹಾರ ಕಿಟ್ ಹಾಗೂ ಸಾಮಗ್ರಿಗಳನ್ನು ಖಾನಾಪುರ ತಾಲೂಕಿನ ಕಮಲಾತಾಯಿ ಫೌಂಡೇಶನ್ ವತಿಯಿಂದ ಕಕ್ಕೇರಿಯ ಓಎಚ್ಸಿ ಕೇಂದ್ರಕ್ಕೆ ವಿತರಿಸಲಾಯಿತು.

ಈ ವೇಳೆಯಲ್ಲಿ ಬಿಜೆಪಿ ಯುವ ಮೋರ್ಚಾ ತಾಲೂಕಿನ ಅಧ್ಯಕ್ಷರಾದ ದರ್ಶನ ಕಿಲಾರಿ ಹಾಗೂ ಸುರಾಪುರ ಗ್ರಾಮದ ಯುವಕರಾದ ಸಚಿನ್ ಗಸ್ತಿ ಹಾಗೂ ಬಿಜೆಪಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಮುಖರಾದ ಸಿದ್ದು ಪಾಟೀಲ ಹಾಗೂ ಫೌಂಡೇಶನ್ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಹಾಗೂ ತಂಡದವರು ಸೇರಿದಂತೆ ಅನೇಕರು ಇದ್ದರು.











