ವಿಕೆ ರೀಲಿಸ್: ಅಭಿಮಾನಿಗಳಲ್ಲಿ ಸಂತಸ

ಬೆಳಗಾವಿಉಚ್ಚ ನ್ಯಾಯಾಲಯ ನನಗೆ ಜಾಮೀನು ಮಂಜೂರು ಮಾಡಿದ್ದಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ. ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

promotions

ಶನಿವಾರ ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

promotions

ನಾನು, ನನ್ನ ಕುಟುಂಬಸ್ಥರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯ ಎಲ್ಲ‌ ಮುಖಂಡರು, ನನ್ನ ಕ್ಷೇತ್ರದ ಜನರರು, ಅಭಿಮಾನಿಗಳು ಸಾಕಷ್ಟ ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುತ್ತೇನೆ ಎಂದರು.

ನಾನು ಇಂದು ನಿನ್ನೆಯಿಂದ ರಾಜಕೀಯ ಮಾಡಿದವಲ್ಲ. ರೈತ ಕುಟುಂಬದಿಂದ, ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದವನು‌. ಇದು ನನ್ನ ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯವಾಗಿದೆ. ನಾನು ನನ್ನ ಕ್ಷೇತ್ರದ ಜನ ನನ್ನ ನಂಬಿದ ಜನರಿಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂಥ ಹೋರಾಟಕ್ಕೂ ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದರು.

ಜೈಲಿನಲ್ಲಿದ್ದಾಗ ಟಾಸ್ಕ್ ನೀಡಿದ್ದರು. ಅವರ ಕಾಯ್ದೆ, ಕಾನೂನಿ ಪ್ರಕಾರ ಇದ್ದೆ‌. ಸಾಕಷ್ಟು‌ ವಿಚಾರ, ಓದುವುದು ಹಾಗೂ ಹಲವಾರು ಬದಲಾವಣೆ ಕಂಡುಕೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕೆಂದು ಕಲಿತುಕೊಂಡಿದ್ದೇನೆ ಎಂದರು.

ರಾಜಕೀಯ ಜೀವನ ಬೇರೆ. ನನ್ನ ಜೀವನ ಬೇರೆ ಸಾಮಾನ್ಯ ಜನರು ಕೂಡ ನನಗೆ ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ. ಅವರಿಗೆ ಎಂದೂ ನಾನು ಋಣಿಯಾಗಿದ್ದೇನೆ ಎಂದರು.

Read More Articles