ಪಂಢರಪುರವನ್ನು ಭಾರತದ ಸ್ವಚ್ಛ ಯಾತ್ರಾ ಸ್ಥಳವಾಗಿ ಪರಿವರ್ತಿಸಲು ಕರೆ :ಪ್ರಧಾನಿ ಮೋದಿ

ಮಹಾರಾಷ್ಟ್ರ :ಸೋಲಾಪುರ್ ಜಿಲ್ಲೆಯ ದೇವಾಲಯದ ಪಟ್ಟಣವಾದ ಪಂಢರಪುರವನ್ನು ಭಾರತದ ಸ್ವಚ್ಛ ಯಾತ್ರಾ ಸ್ಥಳವಾಗಿ ಪರಿವರ್ತಿಸಲು ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಾಲ್ಖಿ (ಪಲ್ಲಕ್ಕಿ) ಹೆದ್ದಾರಿಗಳು ದಕ್ಷಿಣ ಭಾರತದೊಂದಿಗೆ ಸಂಪರ್ಕವನ್ನು ಹೆಚ್ಚಿಸುವುದರೊಂದಿಗೆ ಈ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಎಂದು ಹೇಳಿದರು.

promotions

ಪ್ರಧಾನಮಂತ್ರಿಯವರು ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗದ (NH-965) ಐದು ವಿಭಾಗಗಳು ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ (NH-965G) ಮೂರು ವಿಭಾಗಗಳ ಚತುಷ್ಪಥಕ್ಕೆ ಅಡಿಪಾಯ ಹಾಕಿದರು.

promotions

ಈ ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ 'ಪಾಲ್ಖಿ' (ಪಲ್ಲಕ್ಕಿ) ಗಾಗಿ ಮೀಸಲಾದ ಕಾಲುದಾರಿಗಳನ್ನು ನಿರ್ಮಿಸಲಾಗುವುದು, ಇದು ಭಕ್ತರಿಗೆ ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.

ಹೆದ್ದಾರಿಗಳ ಎರಡೂ ಬದಿಗಳಲ್ಲಿ ಮರಗಳನ್ನು ನೆಡಲು ಮತ್ತು ಸಾಮಾನ್ಯ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳನ್ನು ಸ್ಥಾಪಿಸಲು ಸ್ಥಳೀಯರಿಗೆ ಪ್ರಧಾನಿ ಮನವಿ ಮಾಡಿದರು, ಇದರಿಂದ ವಾರ್ಕರಿಗಳು (ತೀರ್ಥಯಾತ್ರೆ ಅಥವಾ ವಾರಿ ಕೈಗೊಳ್ಳುವ ಭಕ್ತರು) ನೆರಳು ಪಡೆಯಲು ಮತ್ತು ಅವರ ಬಾಯಾರಿಕೆಯನ್ನು ನೀಗಿಸಲು ಸಹಾಯವಗುತ್ತದೆ ಎಂದರು.

ಪ್ರಧಾನಮಂತ್ರಿ ಶ್ರೀ ಮೋದಿ ಅವರು ಮಹಾರಾಷ್ಟ್ರ ಮತ್ತು ಪಂಢರಪುರದ ಜನರಿಗೆ ಹೊಸ ಉಡುಗೊರೆಯನ್ನು ನೀಡುತ್ತಿದ್ದಾರೆ. ಸೋಮವಾರ ನವೆಂಬರ್ 8 ರಂದು ಪಾಲ್ಕಿ ಮಾರ್ಗ ಯೋಜನೆಗಳ ಶಂಕುಸ್ಥಾಪನೆಯೊಂದಿಗೆ ಇತರ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಾಗುವುದು ಎಂದು ನಿತಿನ್ ಗಡ್ಕರಿ ಟ್ವಿಟ್ ಮೂಲಕ ತಿಳಿಸಿದ್ದಾರೆ.

Read More Articles