ವಿಕೇಂಡ್ ಕಫ್ರ್ಯೂ ನಲ್ಲೂ ಮೈರೆತ ಜನತೆ: ತರಕಾರಿ ಕೊಳ್ಳಲು ಜನವೋ ಜನ
- 14 Jan 2024 , 10:56 PM
- Belagavi
- 109
ಬೆಳಗಾವಿ :ಕೊರೊನಾ ಸೋಂಕು ಹಾಗೂ ಒಮಿಕ್ರಾನ್ ಭೀತಿಯಿಂದ ಸರಕಾರ ವಿಕೇಂಡ್ ಕಫ್ರ್ಯೂ ಜಾರಿ ಮಾಡಿದರೂ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ಸರಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕುಂದಾನಗರಿ ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನಲೆ.ಜೈ ಕಿಸಾನ್ ತರಕಾರಿ ಮಾರ್ಕೆಟ್ ನಲ್ಲಿ ಜನವೋ ಜನ. ಬೆಳಗಿನಿಂದಲೇ ತರಕಾರಿ ಖರೀದಿಗೆ ಮುಗಿಬಿದ್ದ ವ್ಯಾಪಾರಸ್ಥರು. ಮಾಸ್ಕ್ ಮರೆತ ಕೆಲವರಿಗೆ ಬೆಳಗಾವಿ ಮಹಾನಗರ ಪಾಲಿಕೆ ಮಾರ್ಷಲ್ ಗಳಿಂದ ಎಚ್ಚರಿಕೆ.











