ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಂದ ಬೆಳಗಾವಿಯ ಗೃಹ ಕಛೇರಿಯಲ್ಲಿ ಮಹಿಳಾ ಕಾರ್ಯಕರ್ತೆಯರು ಕೇಕ್ ಕತ್ತರಿಸಿ, ಸರಳವಾಗಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಪ್ರಮುಖರಾದ ಶ್ರೀಮತಿ ಸೀಮಾ ಪವಾರ್, ಶ್ರೀಮತಿ ಕೋಪರ್ಡೆ, ಶ್ರೀಮತಿ ಸವಿತಾ ಗುಡ್ಡಾಕಾಯು, ಶ್ರೀಮತಿ ಶಿಲ್ಪಾ ಕೇಕ್ರೆ, ಶ್ರೀ ಕಲ್ಗಟ್ಕರ್ ಸೇರಿದಂತೆ ಇತರ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.