ರಾಣೇಬೆನ್ನೂರ ಕಾ ರಾಜಾ ಗಣಪತಿ ಈ ವರ್ಷ ಒಂದೇ ದಿ‌ನ ಮಾತ್ರ

  • 15 Jan 2024 , 1:11 AM
  • Haveri
  • 418

ಹಾವೇರಿ: ರಾಣೇಬೆನ್ನೂರ ನಗರದಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದ ಪ್ರಸಿದ್ಧ ರಾಣೆಬೆನ್ನೂರ ಕಾ ರಾಜಾ ಗಣಪತಿಯನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಒಂದೇ ದಿನ ಮಾತ್ರ ಪ್ರತಿಷ್ಟಾಪನೆ ಮಾಡಲಾಗುವದು ಎಂದು ಸಂಘದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಹೇಳಿದರು . ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ವಂದೇ ಮಾತರಂ ಸ್ವಯಂ ಸೇವಾ ಸಂಘದಿಂದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗುತ್ತಿತ್ತು ಆದರೆ ಇತ್ತೀಚಿಗೆ ಸರ್ಕಾರ ಹೊರಡಿಸಿದ ನಿರ್ದೇಶನದಲ್ಲಿ ಸಾರ್ವಜನಿಕ ಗಣಪತಿಗೆ ಅವಕಾಶ ನೀಡಿದ್ದರಿಂದ ರಾಣೇಬೆನ್ನೂರುಕಾ ರಾಜ್ ಗಣೇಶ ಪ್ರತಿವರ್ಷದಂತೆ ಈ ವರ್ಷ ಕೂಡ 21 ದಿನಗಳು ರಾರಾಜಿಸಲಿದ್ದಾನೆ ಎಂದು ನಂಬಲಾಗಿತ್ತು ಈ ಎಲ್ಲಾ ಊಹಾಪೋಹ  ಮತ್ತು  ಸುಳ್ಳು ಸುದ್ದಿಗಳು ಹರಡುತ್ತಿದ್ದು ಯಾರು ಕೂಡ ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು ಗಣೇಶ ಒಂದೇ ದಿನ ಮಾತ್ರ ಕುರಿಸಲಾಗುವುದು. ಈ ಬಾರಿ ವಿಶೇಷವಾಗಿ 10 ಲಕ್ಷ ರೂ. ವೆಚ್ಚದಲ್ಲಿ 10 ಕೆ.ಜಿ. ತೂಕದ 24 ಇಂಚು ಬೆಳ್ಳಿಯ ಗಣಪತಿ ಮೂರ್ತಿ ಹಾಗೂ ಪೂಜಾ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದ್ದು. 5 ಲಕ್ಷ ವೆಚ್ಚದಲ್ಲಿ ಗಣೇಶ ಮಂಟಪವನ್ನು ಹೂವಿನ ಅಲಂಕಾರ ಹಾಗೂ ತೆಂಗಿನಗರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಂದು ಬೆಳಗ್ಗೆ 8ಗಂಟೆ ಗಣೇಶನನ್ನು ಪ್ರತಿಷ್ಠಾಪಿಸಿ ರಾತ್ರಿ 11 ಗಂಟೆಗೆ ವಿಸರ್ಜಿಸಲಾಗುವುದು. ಆ ದಿವಸ ರಾತ್ರಿ 10.30 ರವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುತ್ತದೆ. ಯಾವುದೇ ಶುಲ್ಕವಿರುವುದಿಲ್ಲ ಉಚಿತ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾತ್ರಿ ಯಾವುದೇ ಹರಾಜು ಪ್ರಕ್ರಿಯೆ, ಅನ್ನ ಸಂತರ್ಪಣೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

promotions

promotions

Read More Articles