ಬೆಳಗಾವಿ ಡಿಕೆಶಿ ಪ್ರವಾಸ ಮುಂದುಡಿಕೆ

ಬೆಳಗಾವಿ: ಜಿಲ್ಲೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಗಮಿಸ ಬೇಕಿದ್ದ ಕೆಪಿಸಿಸಿ ರಾಜ್ಯಾದ್ಯಕ್ಷ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ ಅವರು ಅನಾರೋಗ್ಯ ಸಲುವಾಗಿ ಹಾಗೂ ತೀವ್ರ ಬೆನ್ನು ನೋವು ಕಾಣಿಸಿದ ಹಿನ್ನಲೆ ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸವನ್ನು ಮುಂದೂಡಿದ್ದಾರೆ ವೈದ್ಯರ ಸಲಹೆಯಂತೆ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ . ನಾಳೆ ಅಗಸ್ಟ್ 24 ಬೆಳಗಾವಿ ಜಿಲ್ಲೆಯ ‌ಖಾನಾಪುರ, ರಾಮದುರ್ಗ, ಸವದತ್ತಿ, ಚಿಕ್ಕೋಡಿ ಹಾಗೂ ಅಥಣಿ, ರಮೇಶ ಜಾರಕಿಹೋಳಿ ಕ್ಷೇತ್ರ ಗೋಕಾಕ ಹಾಗೂ ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಮಾತ್ರ ಡಿಕೆಶಿ ಪ್ರವಾಸ ಮಾಡುತ್ತಿರುವುದು ಎಲ್ಲರಿಗೂ ಕುತೂಹಲ ಮೂಡಿಸಿತ್ತು ಆದರೆ ಅನಾರೋಗ್ಯದ ಹಿನ್ನಲೆಯಲ್ಲಿ ವಿಶ್ರಾಂತಿ ಪಡೆದು ಪ್ರವಾಸ ಮೂಂದುಡಲಾಗಿದೆ. 

promotions

promotions

Read More Articles