<strong>ಶಿಗ್ಗಾವಿ: </strong>ತಾಲೂಕಿನ ಚಾಕಾಪೂರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಅಂಗವಾಗಿ ದೇವಸ್ತಾನದಲ್ಲಿ ಪೂಜೆ ಮತ್ತು ಗ್ರಾಮದಲ್ಲಿ ಭಾವಚಿತ್ರ ಮೆರವಣಿಗೆ ಭಕ್ತಿ ವಿಜೃಂಭಣೆಯಿಂದ ಇಂದು ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮದ ವಿಠ್ಠಲ ಮೋತೆನವರ, ರುದ್ರಗೌಡ ಎಸ್ ಪಾಟೀಲ, ಯಲ್ಲಪ್ಪ ಬಗಾಡೆ, ಬಿ ಸಿ ಪಾಟೀಲ, ಮಾದೇವಪ್ಪ ಮೇಟಿ, ಶಿವರಾಜ ಬಾಲೆಹೊಸೂರ, ಮಂಜುನಾಥಗೌಡ ಪಾಟೀಲ, ವಿರುಪಾಕ್ಷಗೌಡ ಪಾಟೀಲ, ಮಲ್ಲಯ್ಯ ಎಸ್ ಪಾಟೀಲ, ರುದ್ರಪ್ಪ ಬಿಸನಳ್ಳಿ, ಮಂಜುನಾಥ. ಹ. ಯಂಕಪ್ಪನವರ, ವಿಠ್ಠಲ.ಲ.ಹೈಬತ್ತಿ, ಶೇಖಪ್ಪ ಬಾಲೆಹೊಸೂರ, ಮಲ್ಲೇಶ ಬಗಾಡೆ, ಮಂಜುನಾಥ ಪೂಜಾರ, ಅನೇಕ ಹಿರಿಯರು ಮುಖಂಡರು, ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು.