ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ
- 15 Jan 2024 , 1:04 AM
- Belagavi
- 102
ಹುಕ್ಕೇರಿ: ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ರಾಷ್ಟçಪೀತ ಮಹಾತ್ಮಾ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸರಕಾರಿ ಶಾಲೆಯಲ್ಲಿ ಹುಕ್ಕೇರಿ ಭಾಜಪಾ ಮಂಡಳದ ಅಧ್ಯಕ್ಷ ರಾಚಯ್ಯಾ ಹಿರೇಮಠ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಸಿದ್ದರಾಮ ಮುಗಳಿ, ಗುರುನಾಥ ಕಡೇಲಿ, ಸುರೇಶ, ಮಹಾಂತೇಶ ಶಿರಹಟ್ಟಿ, ರಾಜು ಘೋಡಗೇರಿ, ಇಬ್ರಾಹಿಂ ಮೋಕಾಶಿ, ಹನುಮಂತ ನಾಯಿಕ ಹಾಗೂ ಶಾಲಾ ಮುಖ್ಯೋಪಾಧ್ಯಾಯಕಿ ಎಸ್ ಎಸ್ ವಾಲೀಕಾರ, ಶಿಕ್ಷಕರಾದ ಆರ್.ಸಿ.ಅಗನೂರಿ, ಎಮ್.ಎಚ್.ಗಿರಿನಾಯಿಕ, ಎನ್.ಎಸ್.ದೇವರಮನಿ, ಎಸ್.ಡಿ.ಜೋಡಟ್ಟಿ, ಟಿ.ಐ.ಬಡಿಗೇರ ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು.












