ದಸರಾ ಸಂದರ್ಭದಲ್ಲಿ ಪ್ರವಾಸಿಗರನ್ನು ಸೆಳೆದ ಮೈಸೂರು ಮೃಗಾಲಯ

ಮೈಸೂರು: ಮೈಸೂರು ಅಂದ್ರೆ ಎಲ್ಲರಿಗೂ ನೆನೆಪಾಗುವುದು ದಸರಾ ಉತ್ಸವ ಈ ದಸರಾ ಉತ್ಸವಕ್ಕೆ ಬಂದವರು ಮೈಸೂರನ್ನು ಒಮ್ಮೆ ಸುತ್ತಿ ನೋಡಕೊಂಡೆ ಹೋಗಬೇಕು ಅಷ್ಟು ಪ್ರೇಕ್ಷಕರನ್ನು ಸೆಳೆಯುತ್ತೆ ಈ ನಾಡು. ಈ ವರ್ಷ ಕರೋನಾ ಮಹಾಮಾರಿ ಹಾವಳಿಯಿಂದ ಅದ್ದೂರಿಯಾಗಿ ದಸರಾ ಆಚರಣೆ ನಡೆಯದಿದ್ದರೂ ದಸರಾ ದಿನದಂದು (ಅಕ್ಟೋಬರ್ 26) ಮೈಸೂರು ಮೃಗಾಲಯಕ್ಕೆ 7,264 ವೀಕ್ಷಕರು ಭೇಟಿ ನೀಡಿದ್ದು, 7,33,950 ರೂ. ಆದಾಯ ಸಂಗ್ರಹವಾಗಿದೆ. ಎಂದು ಈ ಮೃಗಾಲಯದ ಕಾರ್ಯನಿರ್ವಾಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

promotions

ಕಳೆದ 2017 ರಲ್ಲಿ ಮೃಗಾಲಯಕ್ಕೆ ಆಯುಧ ಪೂಜೆಯಂದು 15,449 ಮಂದಿ ಭೇಟಿ ನೀಡಿದ್ದು, ಆದಾಯವು 9.61 ಲಕ್ಷ ಹಾಗೂ ವಿಜಯ ದಶಮಿಯಂದು 31,722 ಮಂದಿ ವೀಕ್ಷಿಸಿದ್ದು, 18.81 ಕೋಟಿ ಆದಾಯ ಹರಿದುಬಂದಿತ್ತು. ದಸರಾದ 10 ದಿನಗಳ ಅವಧಿಯಲ್ಲಿ 1.23 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಒಟ್ಟು 69.17 ಲಕ್ಷ ರೂ. ಆದಾಯಗಳಿಸಿತ್ತು.

promotions

2018ರಲ್ಲಿ ಆಯುಧ ಪೂಜೆಯಂದು 22,398 ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, 17.74 ಲಕ್ಷ ರೂ. ಆದಾಯ ಬಂದಿದ್ದರೆ, ವಿಜಯ ದಶಮಿಯಂದು 32,301 ಮಂದಿ ಪ್ರವಾಸಿಗರು ಭೇಟಿ ನೀಡಿ 25.40 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ದಸರಾ 10 ದಿನಗಳ ಕಾಲ ಒಟ್ಟು 1.53 ಲಕ್ಷ ಮಂದಿ ವೀಕ್ಷಿಸಿದ್ದು, 105.64 ಲಕ್ಷ ರೂ. ಆದಾಯ ಹರಿದು ಬಂದಿತ್ತು.

2019ರಲ್ಲಿ ಆಯುಧ ಪೂಜೆಯಂದು 30,273 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ಆದಾಯವು 29.77 ಲಕ್ಷ ರೂ. ಸಂಗ್ರಹವಾಗಿದ್ದರೆ, ವಿಜಯ ದಶಮಿಯಂದು 28,386 ಮಂದಿ ಪ್ರವಾಸಿಗರ ಭೇಟಿಯಿಂದ 28.28 ಲಕ್ಷ ಸಂಗ್ರಹವಾಗಿತ್ತು. ದಸರಾ 10 ದಿನಗಳಂದು 1.65 ಲಕ್ಷ ಮಂದಿ ಭೇಟಿಕೊಟ್ಟಿದ್ದು, ಒಟ್ಟು 159.76 ಲಕ್ಷ ರೂ. ಆದಾಯ ಹರಿದುಬಂದಿತ್ತು.

ಈ ವರ್ಷ ಕೋವಿಡ್-19 ಹಿನ್ನೆಲೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಆಯುಧ ಪೂಜೆಯಂದು 3,534 ಮಂದಿ ಭೇಟಿ ನೀಡಿದ್ದು, ಆದಾಯವು 3.05 ಲಕ್ಷ ರೂ. ಹಾಗೂ ವಿಜಯ ದಶಮಿಯಂದು 7,264 ಮಂದಿ ಭೇಟಿ ನೀಡಿದ್ದು ಆದಾಯವು 7.33 ಲಕ್ಷದಷ್ಟು ಹಣ ಸಂಗ್ರಹವಾಗಿದೆ. ಅಲ್ಲದೆ ನವರಾತ್ರಿಯಂದು ಮೃಗಾಲಯಕ್ಕೆ ಒಟ್ಟು 20 ಲಕ್ಷ ಮಂದಿ ಭೇಟಿ ನೀಡಿದ್ದು, ಒಟ್ಟು 19.56 ಲಕ್ಷ ರೂ. ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.

Read More Articles