ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದು ಸರಿಯಲ್ಲ; ಮಹಾಂತೇಶ ವಕ್ಕುಂದ

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದಲ್ಲದೇ, ಕುಟುಂಬದ ಮೇಲೆ ಹಲ್ಲೆ ಮಾಡಿದೆ‌ ಎಂದು ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದುಕೊಂದಿರುವ ಮಹಾಂತೇಶ  ಮಹಾವಿಕಾಸಅಗಾಡಿ ಸರಕಾರವು ಮಹಾರಾಷ್ಟ್ರದಲ್ಲಿ ಮಹಾ ಅಯೋಗ್ಯ ಕೆಲಸಗಳಿಗೆ ಹೆಸರಾಗಿದೆ! ಪಲ್ಘಾರ್ ಸಾಧುಗಳ ಹತ್ಯೆಯ ತನಿಖೆಗೆ ಮತ್ತು ಎಫ್ಐಆರ್ ದಾಖಲಿಸಲು ತಡೆ ಒಡ್ಡಿದ್ದ ಸರಕಾರ, ಈಗ ಕ್ಷುಲ್ಲಕ ಕಾರಣಕ್ಕೆ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದಲ್ಲದೇ, ಕುಟುಂಬದ ಮೇಲೆ ಹಲ್ಲೆ ಮಾಡಿದೆ‌. ಈ ಹಿಂದೆಯೂ,

promotions
logintomyvoice

ಸೋನಿಯಾ ಗಾಂಧಿಯನ್ನು ನಿಜನಾಮದಿಂದ ಆ್ಯಂಟೋನಿಯೋ ಮೈನೋ ಎಂದು ಸಂಬೋಧಿಸಿದ್ದಕ್ಕೆ ಅರ್ನಬ್ ಗೋಸ್ವಾಮಿಯವರ ವಿಚಾರಣೆ ನಡೆಸಿದ್ದ ಸರಕಾರದ ನೀಚತನ ಮಿತಿಮೀರಿದೆ* ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

promotions

Read More Articles