ಖಾನಾಪುರ ‌ಕೊಲೆ ಪ್ರಕರಣದಲ್ಲಿ 10 ಜನರ ಬಂಧನ: ಎಸ್ಪಿ‌ ನಿಂಬರಗಿ

ಬೆಳಗಾವಿ:ಖಾನಾಪುರ ತಾಲೂಕಿನ ರೈಲ್ಬೆ ಹಳಿಯ ಮೇಲೆ ಕೊಲೆಗೈದ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಲಕ್ಷ್ಮಣ‌ ನಿಂಬರಗಿ‌ ಹೇಳಿದರು.

promotions

ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

promotions

ಸೆ.28 ರಂದು ಖಾನಾಪುರ ರೈಲ್ವೆ ಹಳೆಯ ಮೇಲೆ ಮೃತದೇಹ‌ ಸಿಕ್ಕಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ ಮೇಲೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಮೃತಪಟ್ಟ ಅಬರಬಾಜ್ ತಾಯಿ ನಜೀಮಾ‌ ಮುಲ್ಲಾ ದೂರು ನೀಡಿದ‌ ಮೇಲೆ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಿದ ಮೇಲೆ ಕಾರ್ಯಚರಣೆ ನಡೆಸಿ 10 ಜನ ಕೊಲೆಗೈದ ಆರೋಪಿಯನ್ನು‌ ಬಂಧಿಸಲಾಗಿದೆ ಎಂದರು.

ಯುವಕನ ಕೊಲೆಯ ಹಿಂದೆ ಯುವತಿಯ ಕುಟುಂಬದವರೇ ಸುಪಾರಿ ಕೊಟ್ಟಿರುವ ಹಿನ್ನೆಲೆಯಲ್ಲಿ ಆತನ ಕೊಲೆ ಮಾಡಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ತು ಜನರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದರು.

Read More Articles