ರಸ್ತೆ ಕಾಮಗಾರಿಕೆ ಚಾಲನೆ ನೀಡಿದ ಸತೀಶ ಜಾರಕಿಹೊಳಿ
- 12 Dec 2023 , 3:47 AM
- Belagavi
- 214
ಯಮಕನಮರಡಿ: ಸಮೀಪದ ಇಸ್ಲಾಂಪೂರದಲ್ಲಿ ಶನಿವಾರ ದಿ 17ರಂದು ಶಾಸಕ ಸತೀಶ ಜಾರಕಿಹೊಳಿ ಇವರ ವಿಶೇಷ ಪ್ರಯತ್ನದಿಂದ ಮಂಜೂರಾದ ಸ್ವರ್ಣ ಗ್ರಾಮ 3ನೇ ಹಂತ ಯೋಜನೆಯಡಿಯಲ್ಲಿ 50 ಲಕ್ಷ ರೂ. ಗಳ ವೆಚ್ಚದಲ್ಲಿ ಸಿಮೆಂಟ ಕಾಂಕ್ರೆಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಪಕೀರವ್ವಾ ಹಂಚಿನಮನಿ, ಮಂಜುನಾಥ ಪಾಟೀಲ, ತಾಪಂ ಸದಸ್ಯ ಲಗಮವ್ವಾ ಪರಸಪ್ಪ ಕಲ್ಲೋನಿ, ಸಕಾನಿ ಅಭಿಯಂತೆ ಶ್ರೀಮತಿ ಆರ್ ಪಿ ನಾರಾಯಣಕರ, ಅಭಿಯಂತ ಅಮರ ಬಿರ್ಡೆ, ಗ್ರಾಮಸ್ಥರಾದ ಗೌಡಪ್ಪಾ ಭೀಮಪ್ಪ ಜಿರಲಿ, ಬಿ ಎಸ್ ದೇಸಾಯಿ, ಅಮೀರಾ ಬಿ ದೇಸಾಯಿ, ರಾಮಚಂದ್ರ ಪಾಟೀಲ, ಎಸ್ ಎಫ್ ಹತ್ತರಕಿ, ಮಲ್ಲಪ್ಪ ಕೋತಗಿ, ಮಾಹಾದೇವ ಕೋತಗಿ, ಆರ್ ಬಿ ಪಾಟೀಲ, ಜಿ ಎಲ ಕಲ್ಲಟ್ಟಿ, ಅಶೋಕ ರಾಮಗೋನಟ್ಟಿ, ಚಂದ್ರು ತುಬಾಕಿ, ಲಗಮಪ್ಪಾ ಬಾಗರಾಯಿ, ನಿಂಗಪ್ಪ ಕಾಗಿ, ಲಗಮಪ್ಪ ಕಲ್ಲೋನೊ, ಪರಶುರಾಮ ಹಟ್ಟಿ, ಅಜ್ಜಪ್ಪಾ ಹಟ್ಟಿ, ದುಂಡಪ್ಪಾ ಬಡಿಗೇರ, ಪಕೀರಪ್ಪಾ ಕೋತಗಿ, ಅಡಿವೆಪ್ಪಾ ಪಾಟೀಲ ಸೇರಿದಂತೆ ಉಪಸ್ಥಿತರಿದ್ದರು.












