ಅಥಣಿಯಲ್ಲಿದ್ದಾರೆ ಬಂಗಾರದ ಮನುಷ್ಯನ ಸಹೋದರರು
- 15 Jan 2024 , 3:32 AM
- Belagavi
- 157
ಅಥಣಿ : ಡಾ.ರಾಜಕುಮಾರ ನಟನೆಯ ಬಂಗಾರದ ಮನುಷ್ಯ ಕನ್ನಡದ ಚಲನಚಿತ್ರಕ್ಕೆ ಮಾದರಿಯಾಗಿರುವ ಅಥಣಿಯ ಯುವಕರು ಬಂಜೂರು ಭೂಮಿಯಲ್ಲಿ ಚಿನ್ನದ ಬೆಳೆ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿದ್ದಾರೆ.

ಕೃಷಿಯಲ್ಲಿ ಏನು ಇಲ್ಲ ಅನ್ನೋವ್ರು ಯುವ ರೈತರ ಸಾಧನೆ ನೋಡಿ ಎರಡು ಎಕರೆ ಭೂಮಿಯಲ್ಲಿ ಬದುಕು ಕಟ್ಟಿ ಕೊಂಡು ಮಾದರಿ ಯಾದ ಅಣ್ಣ- ತಮ್ಮಂದಿರು. ಬರಡು ಭೂಮಿಯಲ್ಲಿ ನೂತನ ತಂತ್ರಜ್ಞಾನ ಬಳಸಿ ಸ್ಟ್ರಾಬೆರಿ ಬೆಳೆಸಿದ ಚಾನಾಕ್ಷ ರೈತ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮ ಸುರೇಶ ಕಂಟೆಕರ ಅವರ ಮೂರು ಮಕ್ಕಳಿಂದ ಉತ್ತಮ ಸಾಧನೆ ಮಾಡಿದ್ದಾರೆ.
ನಮಗೆ ಸಮಯಕ್ಕೆ ಸರಿಯಾಗಿ ಕರೆಂಟ್,ನೀರು, ಬೇಳೆದ ಬೆಳೆಗೆ ಉತ್ತಮ ಬೆಲೆ ನೀಡಿದ್ರೆ ಸಾಕು ಸರಕಾರದ ಸಬ್ಸಿಡಿ ಸಾಲಮನ್ನಾ ನಮಗೆ ಬೇಡ. ಎರಡು ಎಕರೆ ಭೂಮಿಯಲ್ಲಿ ವಿವಿಧ ತರಕಾರಿ ಸ್ಟ್ರಾಬೆರಿ ಮಿಶ್ರ ಬೆಳೆ ಯಿಂದ ಉತ್ತಮ ಇಳುವರಿ ತಾವು ಬೆಳೆದ ಬೆಳೆಯನ್ನ ಸ್ವತಃ ತಾವೇ ವ್ಯಾಪಾರ ಮಾಡುವ ಶೈಲಿಯಿಂದ ದುಪ್ಪಟ್ಟು ಲಾಭವಾಗುತ್ತಿದೆ.
ಕಡಿಮೆ ಔಷಧಿ ಬಳಸಿ ಸಾವಯುವ ಪದ್ಧತಿ ಅಳವಡಿಕೆ ಏನು ಇಲ್ಲದ ನಮಗೆ ಭೂಮಿ ಎಲ್ಲವಣ್ಣ ಕೊಟ್ಟಿದೆ.. ರೈತರಲ್ಲಿ ಏಕಾಗ್ರತೆ ಮುಖ್ಯ.ಐ ಟಿ, ಬಿ ಟಿ ಕೆಲಸ ನಮಗೆ ಬೇಡ ನಮ್ಮವರೊಂದಿ ನಾವು ಕೃಷಿಯಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಯುವಕನ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.










