ಕಾಂಗ್ರೆಸ್ ಮುಖಂಡನ ಹತ್ಯಗೆ ಬಿಗ್ ಟ್ವಿಸ್ಟ್ ; ನಾಲ್ವರು ಹಂತಕರು ಅರೆಸ್ಟ್
- shivaraj bandigi
- 9 Apr 2024 , 8:21 PM
- Belagavi
- 720
ಅಥಣಿ : ತಾಲೂಕಿನ ಖಿಳೆಗಾಂವ ಗ್ರಾಮದ ಅಣ್ಣಪ್ಪ ನಿಂಬಾಳ ಹತ್ಯಯ ಆರೋಪಿಗಳನ್ನ ಖಾಕಿ ಪಡೆ ಖೇಡ್ಡಾಕೆ ಕೆಡವಿದೆ ನಾಲ್ವರು ಕರೋಪಿಗಳು ಪೊಲೀಸರ ಅಥಿತಿಯಾಗಿದ್ದು ತನಿಖೆ ಚುರುಕುಗೊಂಡಿದೆ.

ನೆರೆಯ ಪಾಂಡೆಗಾಂವ ಗ್ರಾಮದ ವಿಠಲ ಶ್ರವಣಕುಮಾರ ಪೂಜೇರಿ (30) ಶಿರೂರ ಗ್ರಾಮದ ಶಿವಾಜಿ ಲಹು ಹಜಾರೆ (26) ಸುಖದೆವ ರಘುನಾಥ ಹಜಾರೆ (26) ಸಂತೋಷ ಅವಜಿ ಹೋನಮೋರೆ (24) ಆರೋಪಿಗಳನ್ನ ಪೊಲೀಸರು ಸೋಮವಾರ ಸಾಯಂಕಾಲ ಬಂಧಿಸಿದ್ದಾರೆ.

ಕೇವಲ 20 ಗುಂಟೆ ಜಮೀನಿಗಾಗಿ ಪ್ರಭಾವಿ ಕಾಂಗ್ರೆಸ್ ಮುಖಂಡನ ಹತ್ಯ ಆಯ್ತಾ ಅನ್ನೋ ಅನುಮಾನ ಕಾಡುತ್ತಿದೆ. ಮಾಜಿ ಡಿಸಿಎಂ ಸವದಿ ಆಪ್ತ ಅಣ್ಣಪ್ಪ ನಿಂಬಾಳ ಭೀಕರ ಹತ್ಯಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಅವರಿಸಿದ್ದು ಕೊಲೆಯ ಹಿಂದಿನ ಅಸಲಿ ಸತ್ಯ ತಿಳಿಯಬೇಕಿದೆ.
ವರದಿ : ರಾಹುಲ್ ಮಾದರ










