ರಮೇಶ ಜಾರಕಿಹೊಳಿಗೆ ಹೈಕಮಾಂಡ್, ಸಿಎಂ ಸಚಿವ ಸ್ಥಾನ ನೀಡುವ ವಿಶ್ವಾಸ ಇದೆ: ವಿಧಾನ ಪರಿಷತ್ ಸದಸ್ಯ ಲಖನ್

ಬೆಳಗಾವಿ: ಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಸ್ಥಾನ ಮಾನ ನೀಡುವ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ತಿಳಿಸಿದರು.

promotions

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯದಮವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು 17 ಶಾಸಕರ ಶ್ರಮ ಇದೆ. ಇದರಲ್ಲಿ ರಮೇಶ ಜಾರಕಿಹೊಳಿ ಕೂಡ ಒಬ್ಬರು. ಪಕ್ಷ ಅವರಿಗೆ ಸೂಕ್ತ ಸ್ಥಾನ ಮಾನ ನೀಡುವ ವಿಶ್ವಾಸ ಇದೆ ಎಂದರು.

promotions

ಅಧಿವೇಶನ ಪ್ರಾರಂಭವಾಗಿದೆ. ನಾನು ಈಗ ಪಕ್ಷೇತರ ಸದಸ್ಯನಾಗಿದ್ದೇನೆ. ವಿಷಯದ ಆಧಾರಿತವಾಗಿ ನಾನು ಬೆಂಬಲ ಸೂಚಿಸುತ್ತೇನೆ ಎಂದರು. ಕರ್ನಾಟಕದಲ್ಲಿ ಮತಾಂತರ ಕಾಯ್ದೆ ನಿಷೇಧದ ಕಾಯ್ದೆಯ ವಿಷಯ ಬಂದಾಗ ನೋಡೋನಾ ಬಂದಾಗ ವಿಚಾರ ಮಾಡೋಣ. ಇಲ್ಲಿಯವರೆಗೂ ನನಗೆ ಯಾವ ಪಕ್ಷದವರು ನನ್ನ ಸಂಪರ್ಕಕ್ಕೆ ಬಂದಿಲ್ಲ. ವಿಷಯದ ಆಧಾರದ ಮೇಲೆ ನಾನು ಮತ ಹಾಕುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ನಮ್ಮ ರಾಜಕೀಯ ಗುರುಗಳು. ಆದರೆ ಕೆಲ ಸ್ವಯಂ ಘೋಷಿತ ನಾಯಕರಿಂದ ಅವರ ಸಲುವಾಗಿ ವಿಚಾರ ಮಾಡಬೇಕಾಗುತ್ತದೆ ಎಂದರು.

Read More Articles