ಜಗದ್ಗುರುಗಳ ದರ್ಶನ ಪಡೆದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
- 15 Jan 2024 , 3:03 AM
- Belagavi
- 113
ಬೆಳಗಾವಿ : ಉತ್ತರಾಖಂಡ ರಾಜ್ಯದ ಕೇದಾರ ಕ್ಷೇತ್ರದ ಶ್ರೀ ಹಿಮವತ್ ಜಗದ್ಗುರುಗಳು ಬುಧವಾರ ತಮ್ಮ ಮುತ್ನಾಳ ಶಾಖಾ ಮಠಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜಗದ್ಗುರುಗಳ ದರ್ಶನ. ಆಶೀರ್ವಾದ ಪಡೆದರು.

ಕಾಮಗಾರಿಗೆ ಚಾಲನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಬಂಜಾರಾ ಕಾಲೋನಿಯ ಡ್ರೇನ್ ನಿರ್ಮಾಣದ ಸಲುವಾಗಿ 15 ನೇ ಹಣಕಾಸಿನ ಆಯೋಗದಿಂದ 10 ಲಕ್ಷ ರೂ,ಗಳು ಬಿಡುಗಡೆಯಾಗಿದ್ದು, ಬುಧವಾರ ಡ್ರೇನ್ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.










