ನಗರದಲ್ಲಿ ಭಯೋತ್ಪಾದಕನ ಬಂಧನ , ಜಮ್ಮು ಕಾಶ್ಮೀರ ಪೊಲೀಸರಿಗೆ ಅಗತ್ಯ ನೆರವು :ಸಿಎಂ ಬೊಮ್ಮಾಯಿ
- 15 Jan 2024 , 12:32 AM
- Bengaluru
- 90
ಬೆಂಗಳೂರು: ಬೆಂಗಳೂರಿನಲ್ಲಿ ಭಯೋತ್ಪಾದಕನೊಬ್ಬನ ಬಂಧನವಾಗಿದೆ.ಜಮ್ಮು ಕಾಶ್ಮೀರ ಪೊಲೀಸರಿಗೆ ರಾಜ್ಯ ಸರ್ಕಾರ ಅಗತ್ಯ ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹೊಸಕೋಟೆಗೆ ತೆರೆಳುವ ಮುನ್ನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂಶಯಾಸ್ಪದ ವ್ಯಕ್ತಿಗಳ ಚಲನವಲನ ಮೇಲೆ ನಿರಂತರವಾಗಿ ಕಣ್ಣಿರುತ್ತದೆ. ಹಿಂದೆ ಭಟ್ಕಳ, ಶಿರಸಿಯಲ್ಲಿಯೂ ಬಂಧನಗಳಾಗಿವೆ. ಜಮ್ಮು ಕಾಶ್ಮೀರ ಪೊಲೀಸರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಪಂಚಮಸಾಲಿಸಮುದಾಯಕ್ಕೆ2 ಎಮೀಸಲಾತಿಸ್ವಾಮೀಜಿಗಳೊಂದಿಗೆಚರ್ಚೆ:
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ "ಅವರು ನಮ್ಮ ಸ್ವಾಮಿಗಳು. ಅವರದ್ದೇ ಮನೆ. ತೊಂದರೆ ಏನೂ ಇಲ್ಲ. ಅವರ ಬಳಿ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆ ಸಮಾಜದ ಪ್ರಮುಖರು ಕೃಷ್ಣಾದಲ್ಲಿ ಭೇಟಿಯಾಗಿ ಹಲವಾರು ವಿಚಾರಗಳನ್ನು ಚರ್ಚಿಸಲಾಗಿದೆ ಎಂದರು. 2-3 ದಿನಗಳಲ್ಲಿ ಪುನಃ ಸ್ವಾಮೀಜಿ ಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದರು.










