ಸೋಮವಾರ ಬೆಳಗಾವಿಗೆ ರಂಭಾಪುರಿ ಜಗದ್ಗುರುಗಳ ಆಗಮನ

ಬೆಳಗಾವಿ: ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ‌‌ ಶಾಖೆಗೆ ಜೂ.20 ಸೋಮವಾರದಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ಆಗಮಿಸಲಿದ್ದಾರೆ.

promotions

ಸೋಮವಾರ ಬೆಳಗ್ಗೆ 6 ರಿಂದ 7 ಗಂಟೆವರೆಗೆ ಹುಕ್ಕೇರಿ ಹಿರೇಮಠದಲ್ಲಿ ನಡೆಯುತ್ತಿರುವ ಐದು ದಿನದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡಿರುವ ಯೋಗ ಶಿಬಿರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವದಿಸಲಿದ್ದಾರೆ. 10 ಗಂಟೆಯವರೆಗೆ ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ಜಗದ್ಗುರುಗಳು ಇರಲಿದ್ದು, ಸದ್ಬಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಳ್ಳಬೇಕು.

promotions

10.30ಕ್ಕೆ‌ ಖಾಸಬಾಗದ ವರದಪ್ಪಗಲ್ಲಿಯಲ್ಲಿ ಮುರುಗೋಡ ಅವರ ನಿವಾಸದಲ್ಲಿ ಪಾದ ಪೂಜೆ ಹಾಗೂ ವರದಪ್ಪಗಲ್ಲಿಯಲ್ಲಿ ಜಗದ್ಗುರುಗಳ ಸಾರೋಟ ಉತ್ಸವ ಮತ್ತು ಶ್ರೀಗಳ ಶುಭಾಶೀರ್ವಾದ ಸಂದೇಶ ಜರುಗಲಿದೆ.

ಬೆಳಗಾವಿ ‌ನಗರದ ಸಮಸ್ತ ಸದ್ಬಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ದರ್ಶನವನ್ನು ತೆಗೆದುಕೊಳ್ಳುವವರು ಬೆಳಗ್ಗೆ ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿ ಜಗದ್ಗುರುಗಳ ದರ್ಶನ ಪಡೆದುಕೊಳ್ಳಬೇಕು ಹಾಗೂ ಹುಕ್ಕೇರಿ ಹಿರೇಮಠಕ್ಕೆ‌ ಆಗಮಿಸಿದ ಸಮಸ್ತ ಭಕ್ತರಿಗೆ ಶ್ರೀಮಠದಿಂದ ಜಗದ್ಗುರುಗಳ ಅಮೃತ ಹಸ್ತದಿಂದ ರುದ್ರಾಕ್ಷಿ ಹಾಗೂ ಮಾಸ್ಕ್ ವಿತರಣೆ ಜರುಗಲಿದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More Articles