ಮಂಗಳಸೂತ್ರ ತೆಗೆದುಹಾಕುವುದು ಅತ್ಯುನ್ನತ ಮಾನಸಿಕ ಕ್ರೌರ್ಯ: ಮದ್ರಾಸ್ ಹೈ ಕೋರ್ಟ್

ಇತ್ತೀಚೆಗೆ ‌ಇರೋಡನ್ ವಿವೇಕಾನಂದ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ ಶಿವಕುಮಾರ್ ಅವರ ಮೇಲ್ಮನವಿಯನ್ನು ಅನುಮತಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿ ಎಂ ವೇಲುಮಣಿ ಮತ್ತು ಎಸ್ ಸೌಂಥರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ನೀಡಿದೆ.

promotions

ವಿಚ್ಛೇದಿತ ಪತ್ನಿ “ತಾಳಿ”(ಮಂಗಳಸೂತ್ರ) ತೆಗೆದರೆ ಅದು ಪತಿಯನ್ನು ಮಾನಸಿಕ ಕ್ರೌರ್ಯಕ್ಕೆ ಒಳಪಡಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

promotions

ಮಹಿಳೆಯನ್ನು ಪ್ರಶ್ನೆ ಮಾಡಿದಾಗ ಪ್ರತ್ಯೇಕತೆಯ ಸಮಯದಲ್ಲಿ ಅವಳು ತನ್ನ ತಾಳಿ ಯನ್ನು (ಮಂಗಳಸೂತ್ರ) ತೆಗೆದ್ದಿದ್ದಾಳೆ ಎಂದು ಒಪ್ಪಿಕೊಂಡು ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದಾಳೆ ಎಂಬುದು ಅವರ್ ಸ್ವಂತ ಒಪ್ಪಿಗೆಯಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಹೆಂಡತಿಯ ಕುತ್ತಿಗೆಯಲ್ಲಿರುವ "ತಾಳಿ" ಎಂಬುದು ಪವಿತ್ರ ವಿಷಯವಾಗಿದ್ದು, ಇದು ವೈವಾಹಿಕ ಜೀವನದ ನಿರಂತರತೆಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ಗಂಡನ ಮರಣದ ನಂತರ ಮಾತ್ರ ತೆಗೆದುಹಾಕಲಾಗುತ್ತದೆ. ಆದ್ದರಿಂದ, "ತಾಳಿ " ಅನ್ನು ತೆಗೆದುಹಾಕುವುದು ಅತ್ಯುನ್ನತ ಮಾನಸಿಕ ಕ್ರೌರ್ಯವನ್ನು ಪ್ರತಿಬಿಂಬಿಸುವ ಕ್ರಿಯೆ ಎಂದು ಹೇಳಬಹುದು ಏಕೆಂದರೆ ಅದು ಸಂಕಟವನ್ನು ಉಂಟುಮಾಡಬಹುದು ಮತ್ತು ಪ್ರತಿವಾದಿಯ ಭಾವನೆಗಳನ್ನು ನೋಯಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

Read More Articles