ರೈತರು ಸೂಕ್ತ ಮಾಹಿತಿ ಹೊಂದಿ ಕೃಷಿ ಉನ್ನತೀಕರಣಕ್ಕೆ ಕೈಜೋಡಿಸಲಿ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಕೃಷಿ ಸಂಬಂಧಿ ಹಲವಾರು ಯೋಜನೆಗಳಿದ್ದು ರೈತರು ಅವುಗಳ ಸದುಪಯೋಗ ಪಡೆದು ಕೃಷಿ ಕ್ಷೇತ್ರದ ಉನ್ನತೀಕರಣಕ್ಕೆ ಕೈಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದರು.

promotions

ಅವರು ಸಮಗ್ರ ಕೃಷಿ ಅಭಿಯಾನ ಯೋಜನೆಯಡಿ 2022- 23ನೇ ಸಾಲಿನ ಕೃಷಿ ಮಾಹಿತಿ ನೀಡುವ ರಥಕ್ಕೆ ಉಚಗಾಂವ ಗ್ರಾಮದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

promotions

ಈ ಕೃಷಿ ಮಾಹಿತಿ ರಥ ರೈತರಿಗೆ ಸಹಕಾರಿಯಾಗಲಿದ್ದು ಅವರ ಕೃಷಿ ಚಟುವಟಿಕೆಗಳ ಕುರಿತು ಸಮಗ್ರವಾದ ಮಾಹಿತಿ ನೀಡಲಿದೆ. ಈ ರಥದಲ್ಲಿ ಕೃಷಿಯ ಬಗ್ಗೆ ಸಮಗ್ರ ಮಾಹಿತಿಗಳನ್ನು ಅರಿತ ತಜ್ಞರಿದ್ದು, ರೈತರಿಗೆ ರಸಗೊಬ್ಬರಗಳ, ಬೀಜಗಳ, ವಿವಿಧ ಯಂತ್ರೋಪಕರಣಗಳ ಹಾಗೂ ಕ್ರಿಮಿನಾಶಕಗಳ ಮಾಹಿತಿಯನ್ನು ರವಾನಿಸಲಿದ್ದಾರೆ. ಆದ್ದರಿಂದ ರೈತರು ಇದರ ಸಂಪೂರ್ಣ ಮಾಹಿತಿ ಮತ್ತು ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕೃಷಿ ಸಹಾಯಕ ನಿರ್ದೇಶಕ ಆರ್. ಬಿ. ನಾಯ್ಕರ್, ಉಚಗಾಂವ ಕೃಷಿ ಅಧಿಕಾರಿ ಸಿ.ಎಸ್. ನಾಯ್ಕ್, ಮಲ್ಲೇಶ ನಾಯ್ಕ, ಭಾಗ್ಯಶ್ರೀ ಪಾಟೀಲ, ಆಸಿಫ್ ತಹಶೀಲ್ದಾರ್, ಸಂಜಯ ತಳವಾರ, ಉಚಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Read More Articles