ಶಿವಸೇನೆ ಸಂಸದ ಸಂಜಯ್ ರಾವುತ್ ಮೇಲೆ ಇ ಡಿ ಡ್ರಿಲ್ :ಏನೆ ಆಗಲಿ ಶಿವಸೇನೆ ಬಿಡೋಲ್ಲ ಎಂದ ರಾವುತ್

ಮುಂಬೈ : ಜಾರಿ ನಿರ್ದೇಶನಾಲಯದ ಅಧಿಕಾರಿಯು ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಂಸದ ಸಂಜಯ್ ರಾವುತ್ ಅವರ ಮನೆಗೆ ಭಾನುವಾರ ಬೆಳಿಗ್ಗೆ ತಲುಪಿದರು, ಜುಲೈ 1 ರಂದು ರಾವತ್ ಇಡಿ ವಿಚಾರಣೆಯನ್ನು ಎದುರಿಸಿದರು ಮತ್ತು ಸಂಸ್ಥೆ ಕೇಳಿದರೆ ಮತ್ತೆ ಹಾಜರಾಗುವುದಾಗಿ ಹೇಳಿದರು.

promotions

ಇ ಡಿ ವಿಚಾರಣೆವೇಳೆ ಟ್ವೀಟ್ ಮೂಲಕ ಈಗಲೂ ಶಿವಸೇನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ .

ಯಾವುದೇ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಪ್ರಮಾಣವಚನ ಸ್ವೀಕರಿಸುವ ಮೂಲಕ ನಾನು ಇದನ್ನು ಹೇಳುತ್ತಿದ್ದೇನೆ..ಬಾಳಾಸಾಹೇಬರು ನಮಗೆ ಹೋರಾಟವನ್ನು ಕಲಿಸಿದ್ದಾರೆ.. ನಾನು ಶಿವಸೇನೆ ಪರ ಹೋರಾಟ ಮುಂದುವರಿಸುತ್ತೇನೆ.

ಸುಳ್ಳು ಕ್ರಮ..

ಸುಳ್ಳು ಸಾಕ್ಷ್ಯ

ನಾನು ಶಿವಸೇನೆ ಬಿಡುವುದಿಲ್ಲ.

ನಾನು ಸತ್ತರೂ ನಾನು ಶರಣಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Read More Articles