ಪಂಚಾಯತಿ ನಿರ್ಲಕ್ಷ್ಯ ಅಪಾಯದಿಂದ ಪಾರಾದ ಮಗು

ಚಿಕ್ಕೋಡಿ :  ಸರ್ಕಾರಿ ಶಾಲಾ ಆವರಣದಲ್ಲಿ ತೊಡಿದ ಗುಂಡಿ ಮುಚ್ಚದೇ ಬಿಟ್ಟಿದ್ದರಿಂದ 

promotions

ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ  ನೀರು ಪಾಲಾಗುವದರಿಂದ ಬಚಾವಾದ ಘಟನೆ   ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ನಡೆದಿದೆ. 

promotions

ಸರ್ಕಾರಿ ಶಾಲಾ ಆವರಣದಲ್ಲಿ  ಗುಂಡಿ  ತೋಡಿ ಮುಚ್ಚದೆ ಹಾಗೇ ಬಿಟ್ಟಿರುವದರಿಂದ ಆಟವಾಡುತ್ತಿದ್ದ ಬಾಲಕ ಗುಂಡಿಗೆ ಬಿದ್ದಿದ್ದಾನೆ ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ನೀರು ಪಾಲಾಗುತ್ತಿದ್ದ ಬಾಲಕನನ್ನು ಪಾರು ಮಾಡಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. 

ಗ್ರಾಮ ಪಂಚಾಯತಿಯ  ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು  ಗ್ರಾಮಸ್ಥರು ಆರೋಪಿಸಿದರಲ್ಲದೆ ಗುಂಡಿ ಮುಚ್ಚುವಂತೆ ಪಂಚಾಯತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

Read More Articles