ಮಹಾ ಜನತೆಗೆ ಕರವೇ ಸ್ವಾಗತ

ಬೆಳಗಾವಿ: ಮಹಾ ಜನತೆಯ ಕನ್ನಡದ ಅಭಿಮಾನಕ್ಕೆ ಸತ್ಕರಿಸಿ ಕರುನಾಡಿಗೆ ಸ್ವಾಗತ ಕೊರುತ್ತಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಉಮದಿ ಗ್ರಾಮದ ಕನ್ನಡಿಗರಿಗೆ ಕಾಗವಾಡ ತಾಲೂಕಿನ ಕರವೇ ಮುಖಂಡರಿಂದ ಸ್ವಾಗತ ಮಾಡಿದ್ದಾರೆ.

promotions

ಮಹಾರಾಷ್ಟ್ರದ ಸುಮಾರು 42 ಹಳ್ಳಿಗಳು ನೀರಾವರಿ ಇಲ್ಲದೆ ಪರದಾಟ ನಡೆಸಿದ್ದಾರೆ. ಕರ್ನಾಟಕದ ಬಬಲೆಶ್ವರ ಏತ ನೀರಾವರಿಯ ನಿರೀಕ್ಷೆಯಲ್ಲಿರುವ ಮಹಾ ಜನತೆ. ಈಗಾಗಲೇ ಮಹಾರಾಷ್ಟ್ರ ಗಡಿಯಲ್ಲಿರುವ ಸುಮಾರು ಹಳ್ಳಿಗಳಿಗೆ ಕುಡಿಯಲು ನಿರೋದಗಿಸಿದ ಕರುನಾಡು.

promotions

ಮಹಾರಾಷ್ಟ್ರ ದಲ್ಲಿ ಜತ್ತ್ ಕನ್ನಡಿಗರು ಎಂಬ ಪ್ರತ್ತೇಕ ಸಂಘ ಕಟ್ಟಿಕೊಂಡ ಕನ್ನಡ ಅಭಿಮಾನಿಗಳು. 2004 ರಿಂದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದ್ದರು ಮಹಾರಾಷ್ಟ್ರ ಸರ್ಕಾರ ವಿಫಲ. ಮಹಾ ಸರ್ಕಾರ ಗಡಿ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಆದರೆ ಕರ್ನಾಟಕ ಸರ್ಕಾರ ಗಡಿ ಕನ್ನಡಿಗರಿಗೆ ಅನೇಕ ಯೋಜನೆ ನೀಡಿದೆ.

ನಮಗೆ ಜೀವನ ಮುಖ್ಯ ಆರ್ಥಿಕವಾಗಿ ಹಿಂದುಳಿದ ನಮಗೆ ಕರ್ನಾಟಕ ಸರ್ಕಾರದ ಮೇಲೆ ಭರವಸೆ ಇದೆ ನಾವು ಕರ್ನಾಟಕಕ್ಕೆ ಬರುತ್ತೇವೆ ಉಮದಿ ಗ್ರಾಮಸ್ಥರು

Read More Articles