ಶಾಲೆ ಚಕ್ಕರ ಹಾಕುವ ಶಿಕ್ಷಕರ ಮೇಲೆ ಕ್ರಮ: ಸಚಿವ ನಾಗೇಶ

ಬೆಳಗಾವಿ: ಮರಾಠಿ ಶಾಲೆಯಲ್ಲಿ‌ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ತುಂಬಾ  ಕಡಿಮೆಯಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

promotions

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರಾಠಿ ಶಾಲೆಯಲ್ಲಿರುವ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಭಾಷೆ ಕಲಿಯಬೇಕೆಂಬ ಆಸಕ್ತಿ ಹೆಚ್ಚಾಗಿದೆ. ಈ ಕುರಿತು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರೊಂದಿಗೆಯೂ ಮಾತುಕತೆ ಮಾಡಿದ್ದೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಸತ್ಯಕ್ಕೆ ದೂರವಾದ ಆರೋಪ‌ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

promotions

ರಾಜ್ಯದಲ್ಲಿ ಒಟ್ಟು 48 ಸಾವಿರ ಶಾಲೆಗಳನ್ನು ನಡೆಸುತ್ತಿದ್ದೇವೆ. 77 ಸಾವಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇವೆ. ಬೆಟ್ಟ, ತೋಟದ ಮನೆಯಲ್ಲಿ ಶಾಲೆಗಳಿವೆ ಎನ್ನುವ ಆರೋಪವೂ ಇದೆ. ಇದಕ್ಕೆ ನಾವು ಎರಡ್ಮೂರು ಯೋಚನೆ ಮಾಡುತ್ತೇವೆ. ಶಿಕ್ಷಕರನ್ನು ಪರೀಕ್ಷೆಯ ಮೂಲಕ ಸರಿ ಮಾಡುವುದು ತಾತ್ವಿಕವಾಗಿ ಸರಿಯಲ್ಲ. ಆದರೂ ಈಗೀನ ತಂತ್ರಜ್ಞಾನ ಉಪಯೋಗಿಸಿ ಮಾಡೋಣ ಎಂದರೆ ಬೇಕಾದಷ್ಟು ಕಡೆ ನೆಟ್ ಇಲ್ಲ.

ಯಾರು ಒಳ್ಳೆಯವರಿದ್ದಾರೆ ಅವರು ಶಾಲೆಗೆ ಬಂದೆ ಬರುತ್ತಾರೆ. ಕೆಲ ಶಿಕ್ಷಕರು ಶಾಲೆ ಮುಗಿಯುವ ಮುನ್ನವೇ ಮನೆಗೆ ಹೋಗುವವರಿದ್ದಾರೆ. ಅಂಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

Read More Articles