ಬೆಳಗಾವಿಯಿಂದ ಹೊಸ ರೈಲುಗಳನ್ನು ಬಿಡುವಂತೆ ರೈಲ್ವೆ ಸಚಿವರನ್ನು ಕೋರಿದ ಮಂಗಳಾ ಅಂಗಡಿ
- 30 Dec 2023 , 10:32 AM
- Delhi
- 189
ದೆಹಲಿ : ಕೇಂದ್ರ ರೈಲ್ವೆ ಸಚಿವರಾದ ಆಶ್ವಿನಿ ವೈಷ್ಣವ ಅವರನ್ನು ಭೇಟಿಯಾದ ಮಂಗಳಾ ಅಂಗಡಿ ಬೆಳಗಾವಿಯ ನೂತನ ರೈಲ್ವೆ ನಿಲ್ದಾಣದಿಂದ ವಿವಿಧೆಡೆ ನೂತನ ರೈಲುಗಳನ್ನು ಚಲಾಯಿಸುವ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಅಂಗಡಿ ತಿಳಿಸಿದ್ದಾರೆ.











