ಜಮೀನು ವಿಚಾರವಾಗಿ ಸಂಬಂಧಿಗಳ ನಡುವೆ ಗಲಾಟೆ : ಯುವಕನಿಗೆ ಚಾಕು ಇರಿತ
- shivaraj B
- 16 Oct 2024 , 9:34 AM
- Koppal
- 707
ಕೊಪ್ಪಳ : ಕುಕನೂರು ತಾಲೂಕಿನ ತಳಕಲ್ ಗ್ರಾಮದ ಹೊರವಲಯದಲ್ಲಿ ಸಹೋದರ ಸಂಬಂಧಿಗಳು ಹಳೇ ದ್ವೇಷ ಹಾಗೂ ಜಮೀನು ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಚಾಕು ಇರಿತವಾದ ಘಟನೆ ಇಂದು ಸಾಯಂಕಾಲ ಜರುಗಿದೆ.

ಕೋಮಲಾಪುರ ಗ್ರಾಮದ ಗವಿಸಿದ್ದಪ್ಪ(30) ಚಾಕು ಇರಿತಕ್ಕೊಳಗಾದ ವ್ಯಕ್ತಿ ಅವರ ಸಹೋದರ ಸಂಬಂಧಿ ಮುತ್ತಣ್ಣ(21) ಶಾಂತಪ್ಪ ಪೂಜಾರಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಗವಿಸಿದ್ದಪ್ಪನಿಗೆ ಮನಃಬಂದಂತೆ ಚಾಕು ಇರಿದು ಹಲ್ಲೆ ಗಂಭಿರವಾಗಿ ಗಾಯಗೊಂಡ ವ್ಯಕ್ತಿ ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿ ಪರೀಶಿಲನೆ ನಂತರದಲ್ಲಿ ಕುಕನೂರು ಠಾಣಾ ಪಿಎಸ್ಐ ಸ್ಥಳಕ್ಕೆ ದೌಡಾಯಿಸಿ
ಗಾಯಾಳುವನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದೆ.
ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಘಟನೆ ಇದಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ.
ವರದಿ : ರವಿಚಂದ್ರ ಬಡಿಗೇರ










