ರಾಜಸ್ಥಾನ ಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ
- 15 Jan 2024 , 12:34 AM
- Ballari
- 104
ಬೆಳಗಾವಿ:ಇಂದ್ರಕುಮಾರ್ ಎಂಬ ದಲಿತ ಬಾಲಕನ ಸಾವಿನ ಹೊಣೆ ಹೊತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ರಾಜೀನಾಮೆ ಕೊಡಬೇಕು ಹಾಗೂ ಆ ಕಾಂಗ್ರೆಸ್ ಸರಕಾರವನ್ನು ಜವಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಡಿಸಿ ಅವರಿಗೆ ಮನವಿಯೊಂದನ್ನು ಸಲ್ಲಿಸಿದರು.

ರಾಜಸ್ಥಾನ ಜಿಲ್ಲೆಯ ಜಲೋರ ಜಿಲ್ಲೆಯ ಸುರಾಣಾ ಎಂಬ ಹಳ್ಳಿಯಲ್ಲಿ ಇಂದ್ರಕುಮಾರ್ ಎಂಬಾತನು ದಲಿತ ವಿದ್ಯಾರ್ಥಿಯನ್ನು ಅಮಾನವೀಯವಾಗಿ ಥಳಿಸಿರುತ್ತಾನೆ,ಆದ್ದರಿಂದ ಚಿಕಿತ್ಸೆಗೆಂದು ಅಹ್ಮದಾಬಾದ ಆಸ್ಪತ್ರೆಗೆ ಸೇರಿಸುತ್ತಾರೆ ಆದರೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವನ್ನಪ್ಪುತ್ತಾನೆ .

ದಲಿತ ವಿದ್ಯಾರ್ಥಿಗೆ ರಕ್ಷಣೆ ನೀಡಲಾಗದ ರಾಜಸ್ಥಾನ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಒತ್ತಾಯ ಮಾಡಿದರು.
ಮುರುಘೇಂದ್ರ ಗೌಡ ಪಾಟೀಲ, ದಾದಾಗೌಡ ಬಿರಾದಾರ, ಡಾ. ಸೋನಾಲಿ ಸರ್ನೋಬತ್ ಇದ್ದರು.










