ಬೆಳಗಾವಿ ಉತ್ತರಕ್ಕೆ ಬೆನಕೆ‌ ಮಹಾರಾಜ...!

ಬೆಳಗಾವಿ :ರಾಜ್ಯ ವಿಧಾನಸಭಾ ಚುನಾವಣೆ ಕೆಲವೆ ತಿಂಗಳುಗಳು‌ ಬಾಕಿ ಇದ್ದು ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿಯಲ್ಲಿ ಹಾಲಿ‌ ಶಾಸಕ ಅನಿಲ್ ಬೆನಕೆ‌ ಅವರಿಗೆ ಬಹುತೇಕ ಟಿಕೆಟ್ ಖಚಿತ.

promotions

ಬಿಜೆಪಿ ರಾಷ್ಟ್ರೀಯ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಆಕಾಂಕ್ಷಿಗಳು ಹೆಚ್ಚಾಗುವುದು ಸಹಜ. ‌2023ರ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಕ್ಕೆ ಬಿಡ್ತು ಎಂದು ಕೆಲ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಬ್ಬ ಹರಿದಿನಗಳಲ್ಲಿ ನಗರದ ಪ್ರಮುಖ ವೃತ್ತದಲ್ಲಿ ದೊಡ್ಡ ದೊಡ್ಡ‌‌‌ ಬ್ಯಾನರ್ ಅಳವಡಿಸುತ್ತಿದ್ದಾರೆ.

promotions

ಲಿಂಗಾಯತ ಕೋಟಾದಡಿ ಬೆಳಗಾವಿ ಉತ್ತರ ‌ಮತಕ್ಷೇತ್ರದ ಬಿಜೆಪಿ‌ ಟಿಕೆಟ್ ಗಾಗಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ, ಚುನಾವಣೆಯ ಸಂದರ್ಭದಲ್ಲಿ ಹೊರ‌ ಬರುವ ವೈದ್ಯ ಡಾ. ವಿಜಯ ಪಾಟೀಲ, ತೆರೆ‌ಮರೆಯಲ್ಲಿ ಪಕ್ಷದ ಕೆಲಸ‌‌ ಮಾಡಿಕೊಂಡು‌‌ ಬರುತ್ತಿರುವ ವೀರೇಶ ಕಿವುಡಸಣ್ಣವರ, ಬೆಳಗಾವಿ ಉತ್ತರ ಮತಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟೆಪ್ಪನವರ ತೀವ್ರ ಪೈಪೋಟಿ ‌ನಡೆಸಿದ್ದಾರೆ.

ಮರಾಠಾ ಕೋಟಾದಡಿ ಉಜ್ವಲಾ ಬಡವನಾಚೆ ಸಂಘ ಪರಿವಾರದ ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ‌ಮಟ್ಟದ ನಾಯಕರ ಮೇಲೆ ಲಾಬಿ‌‌‌ ನಡೆಸಿದ್ದಾರೆ ಎಂದು ತಿಳಿದು‌ ಬಂದಿದೆ.

ಹಾಲಿ‌ ಶಾಸಕ, ಬಿಜೆಪಿ ನಗರ‌ ಜಿಲ್ಲಾಧ್ಯಕ್ಷರೂ ಆಗಿರುವ ಅನಿಲ್ ಬೆನಕೆ‌ ಅವರಿಗೆ ಟಿಕೆಟ್ ಪಕ್ಕಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ‌ಸ್ಪಷ್ಟ ಸಂದೇಶ ರವಾನಿಸಿದರೂ ಬಿ ಫಾಮ್೯ ನಂಗೆ ಸಿಕ್ಕಿತ್ತು ಎಂದು ಹಬ್ಬದ ದಿನಗಳಲ್ಲಿ‌ ದೊಡ್ಡ ದೊಡ್ಡ ಬ್ಯಾನರ್ ಅಳವಡಿಸಿಕೊಂಡು‌‌ ಹೋರಟಿರುವ ಸ್ವಯಂ‌ ಘೋಷಿತ ನಾಯಕರುಗಳಿಗೆ ಬಿಜೆಪಿ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ.

ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಹೆಸರು ಹೇಳದೆ ಚುನಾವಣೆಗೆ ಸ್ಪರ್ಧೆ ನಡೆಸಿದ್ದವರ ಮೇಲೆ‌ ಉಚ್ವಾಟನೆ ಮಾಡಿ ಕ್ರಮ ಕೈಗೊಂಡಿದ್ದ ಬಿಜೆಪಿ ಇಂಥವರಿಗೆ ಏನು ಮಾಡುತ್ತದೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದಾರೆ.

Read More Articles