ಕಮಲ ಬಿಟ್ಟು ಕೈ ಹಿಡಿದ ಬಿಜೆಪಿ ಸಂಸದ

ಕೊಪ್ಪಳ: ರಾಜ್ಯದಲ್ಲಿ 2ನೇ ಹಂತದಲ್ಲಿ ಚುನಾವಣಾ ಪ್ರಚಾರ ಬಿರುಸು ಪಡೆದುಕೊಳ್ಳುತ್ತಿರುವ ಹಂತದಲ್ಲಿ ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಟಿಕೆಟ್ ವಿಷಯದಲ್ಲಿ ಅಸಮಾಧಾನದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಸದ್ಯ 30 ವರ್ಷಗಳ ರಾಜಕೀಯ ವೈರಿ ಹಿಟ್ನಾಳ್‌ ಕುಟುಂಬದ ಜತೆ 'ಕೈ' ಜೋಡಿಸಿರುವುದು ಅಚ್ಚರಿ ತಂದಿದೆ.

promotions

promotions

Read More Articles