ದೇಶಕ್ಕೆ ಸ್ವಾತಂತ್ರ್ಯ ದೊರಕಲು ಬಿಜೆಪಿ, ಆರ್‌ಎಸ್‌ಎಸ್‌ನ ಯಾವುದೇ ಪಾತ್ರವಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಗೋಕಾಕ: ದೇಶಕ್ಕೆ ಸ್ವಾತಂತ್ರ್ಯ ದೊರಕಲು ಬಿಜೆಪಿ, ಆರ್‌ ಎಸ್‌ ಎಸ್‌ ಯಾವುದೇ ಪಾತ್ರವಿಲ್ಲ. ನಾವು ಸುಮ್ಮನೇ ಕುಳಿತರೆ ಮೋದಿಯವರೆ ದೇಶಕ್ಕೆ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳುತ್ತಾರೆ. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಲು ಕಾಂಗ್ರೆಸ್‌ ಪಕ್ಷದ ಪಾತ್ರ ಏನು ಎಂಬುವುದನ್ನು ಜನತೆಗೆ ಕಾರ್ಯಕರ್ತರು ತಿಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಕರೆ ನೀಡಿದರು.

promotions

ಗೋಕಾಕ ವಿಧಾನಸಭಾ ಮತಕ್ಷೇತ್ರದ ವಿವಿಧ ಪಟ್ಟಣ, ಗ್ರಾಮಗಳಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಬೃಹತ್‌ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಆರ್‌ಎಸ್‌ಎಸ್‌ನವರು ತಮ್ಮ ಕಚೇರಿ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲು ನಿರಾಕರಿಸಿದ್ದರು.

promotions

ಆದರೆ ಇಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಎಲ್ಲೆಡೆ ಓಡಾಡುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ದೊರಕಲು ಸಾಕಷ್ಟು ಮಹಾನ್‌ ನಾಯಕರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಆ ಮಹಾನ್‌ ನಾಯಕರನ್ನು ಸ್ಮರಿಸುವುದು ಅಗತ್ಯವಿದೆ.

ಸುಳ್ಳು ಪ್ರಚಾರವನ್ನು ಯುವಕರು ನಂಬಬಾರದೆಂದು ಸಲಹೆ ನೀಡಿದರು. ನಂತರ ಪಾಮಲದಿನ್ನಿ, ಘಟಪ್ರಭ, ಶಿಂದಿಕುರಭೇಟಿ, ಧುಪದಾಳ, ಕೊಣ್ಣುರ, ಸಾವಳಗಿ, ಮರಡಿಮಠ, ಗೋಕಾಕ ಪಾಲ್ಸ್‌ ನಲ್ಲಿ ಕಾಂಗ್ರೆಸ್‌ ಪಕ್ಷದ ಪಾದಯಾತ್ರೆ ಸಂಭ್ರಮದಿಂದ ನೆರವೇರಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಅಶೋಕ ಪೂಜಾರಿ, ಶಂಕರ್ ಗಿಡ್ಡನವರ, ವೇಕ್ ಜತ್ತಿ. ಪುಟ್ಟು ಖಾನಾಪೂರೆ, ಮಾರುತಿ ವಿಜಯನಗರ, ಪ್ರಕಾಶ ಡಾಂಗಿ, ರವಿ ನಾವಿ, ಮಂಜುಳಾ ರಾಮಗಾನಟ್ಟಿ, ಶಿವಲಿಂಗ ಕೊಟಬಾಗಿ, ಪ್ರವೀಣ್ ಗುಡ್ಡಾಕಾಯಿ, ಗೌಡಪ್ಪಾ ಹೊಳಯ್ಯಾಚಿ ಸೇರಿದಂತೆ ಇತರರು ಇದ್ದರು.

Read More Articles