ಸಂಭ್ರಮ,ಸಡಗರ : ವಿಶ್ವಗುರು ಬಸವ ಜಯಂತಿಗೆ ಗ್ರಾಮದಲ್ಲಿ ಹಬ್ಬದ ಕಳೆ
- shivaraj bandigi
- 10 May 2024 , 7:35 PM
- Belagavi
- 317
ಅಥಣಿ : ದೇಶಾದ್ಯಂತ ಇಂದು ವಿಶ್ವಗುರು ಬಸವಣ್ಣನವರ ಜಯಂತಿಯನ್ನ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ ಪ್ರತಿ ಮನೆ ಮನದಲ್ಲೂ ಬಸವ ಜ್ಯೋತಿ ಅರಳುತ್ತಿದೆ.

ಅದರಲ್ಲೂ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಬಸವ ಜಯಂತಿಯನ್ನ ಹಬ್ಬದಂತೆ ಆಚರಣೆ ಮಾಡಿದ್ದೂ ವಿಶೇಷ ವಾಗಿತ್ತು.

ಗ್ರಾಮದಲ್ಲಿ ಬಸವೇಶ್ವರ ಮೂರ್ತಿಗೆ ಪುಷ್ಪರ್ಚನೆ ಮಾಡುವ ಮೂಲಕ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು ಗ್ರಾಮದಲ್ಲಿ ವಿವಿಧ ಕಲಾ ವಾದ್ಯ ಗಳೊಂದಿಗೆ ಪ್ರಮುಖ ಬೀದಿ ಬೀದಿಗಳಲ್ಲಿ ಕುಂಭಮೇಳ ಹೊತ್ತುಕೊಂಡ ಮಹಿಳೆಯರ ಸಾಲು ನೋಡುಗರ ಗಮನ ಸೆಳೆಯಿತು.
ವರದಿ : ರಾಹುಲ್ ಮಾದರ










