ನಿವೇಶನ ಜಾಗೆ ದುರುಪಯೋಗ ಪಡೆಸಿಕೊಂಡರ ಮೇಲೆ ಕ್ರಮಕ್ಕೆ ಒತ್ತಾಯ
- Shivaraj Bandigi
- 15 Jan 2024 , 6:18 AM
- Belagavi
- 309
ಬೆಳಗಾವಿ : ಬಿಜಗರ್ಣಿ ಗ್ರಾಪಂನಲ್ಲಿ ವಸತಿ ನಿವೇಶನಕ್ಕಾಗಿ ಗುರುತಿಸಲಾಗಿದ್ದ ಜಾಗೆಯನ್ನು ನಂದಾ ಮಾರುತಿ ಕಾಂಬಳೆ ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದನ್ನು ಮರಳಿ ಪಡೆಯಬೇಕೆಂದು ಒತ್ತಾಯಿಸಿ ಸೋಮವಾರ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಿಜಗರ್ಣಿ ಗ್ರಾಪಂ ಸಭೆಯಲ್ಲಿ ವಸತಿ ನಿವೇಶನಕ್ಕಾಗಿ ಜಾಗೆಯನ್ನು ಗುರುತಿಸಲಾಗಿತ್ತು. ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ನಂದಾ ಮಾರುತಿ ಕಾಂಬಳೆ ಎಂಬ ಮಹಿಳೆ ಈ ಜಾಗೆಯಲ್ಲಿ ನಿವೇಶನ ಕಟ್ಟಿಕೊಂಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ಜಾಗೆಯನ್ನು ಬಿಜಗರ್ಣಿ ಗ್ರಾಪಂಗೆ ಮರುಳಿ ಪಡೆಯಬೇಕೆಂದು ಒತ್ತಾಯಿಸಿದರು.











