ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ : ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮಕ್ಕೆ ಭೇಟಿ

ಬೆಳಗಾವಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಜಿಲ್ಲೆಯ ಹೊಸ ತಾಲ್ಲೂಕು ಯರಗಟ್ಟಿಯ ಮುಗಳಿಹಾಳ ಗ್ರಾಮದಲ್ಲಿ "ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ" ಕಾರ್ಯಕ್ರಮ ನಡೆಸುವ ಮೂಲಕ ಹೊಸ ತಾಲ್ಲೂಕಿನ ಜನರ ಅಹವಾಲು, ದೂರು-ದುಮ್ಮಾನುಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ನಡೆಸಿದರು.

promotions

ಹೊಸ ತಾಲ್ಲೂಕಿನ ಸಮಸ್ಯೆಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ತಮ್ಮ ಎರಡನೇ ಗ್ರಾಮ‌ ಭೇಟಿ ಕಾರ್ಯಕ್ರಮಕ್ಕಾಗಿ ಕೂಡ ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದರು.

promotions

ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಕಂಡುಕೊಳ್ಳುವ ಆಶಯದಂತೆ ಮೂರನೇ ಶನಿವಾರವಾದ ಇಂದು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿದರು.

ಮೊದಲ ಬಾರಿ ತಮ್ಮ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಮುಗಳಿಹಾಳ ಗ್ರಾಮದ ರಾಯಣ್ಣ ಸರ್ಕಲ್ ನಲ್ಲಿ ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು.

ಅಲ್ಲಿಂದ ಡೊಳ್ಳುಮೇಳದ ಜತೆ ಕುಂಭಹೊತ್ತ ಮಹಿಳೆಯರು ಮೆರವಣಿಗೆಯ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಕರೆದುಕೊಂಡು ಹೋದರು.

ನಂತರ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಸಿಗೆ ನೀರೆರೆದ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಪೋಷಣ ಅಭಿಯಾನದಡಿ ಆಯೋಜಿಸಿದ ಪೌಷ್ಟಿಕಾಹಾರ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಚಿತವಾಗಿ ಮಧುಮೇಹ, ರಕ್ತದೊತ್ತಡ ಮತ್ತಿತರ ತಪಾಸಣೆಯನ್ನು ಮಾಡಲಾಯಿತು. ಗರ್ಭಿಣಿಯರಿಗೆ ಸೀಮಂತ‌ ಕಾರ್ಯಕ್ರಮ ನೆರವೇರಿಸಿ ಪೌಷ್ಟಿಕಾಹಾರದ ಕಿಟ್ ಗಳನ್ನು ವಿತರಿಸಿದರು.

ಯರಗಟ್ಟಿತಹಶೀಲ್ದಾರಕಚೇರಿನಿರ್ಮಾಣಕ್ಕೆಹತ್ತುಎಕರೆಜಾಗೆ:

ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಬರುವುದನ್ನು ತಪ್ಪಿಸಿ ಅವರವರ ಗ್ರಾಮದಲ್ಲಿಯೇ ಅವರಿಗೆ ಸರಕಾರದ‌ ಸೇವಾ-ಸೌಲಭ್ಯಗಳನ್ನು ಒದಗಿಸುವುದು "ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ" ಕಾರ್ಯಕ್ರಮದ ಉದ್ದೇಶವಾಗಿದೆ.

ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಗ್ರಾಮದಲ್ಲಿಯೇ ತೆಗೆದುಕೊಂಡು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಯರಗಟ್ಟಿಯಲ್ಲಿ ಹೊಸ ತಹಶಿಲ್ದಾರ ಕಚೇರಿ, ನ್ಯಾಯಾಲಯ ನಿರ್ಮಾಣಕ್ಕೆ ತಲಾ ಹತ್ತು ಎಕರೆ ಜಾಗೆಯನ್ನು ನೀಡಲಾಗಿದೆ. ಉಳಿದ ಇಲಾಖೆಯ ಕಚೇರಿಗೂ ಅಗತ್ಯ ಜಮೀನು ನೀಡಲಾಗಿದೆ. ಅದೇ ರೀತಿ ತಾಪಂ ಕಚೇರಿಯ ನಿರ್ಮಾಣಕ್ಕೆ ಕೂಡ ಈಗಾಗಲೇ ಜಾಗೆಯನ್ನು ಗುರುತಿಸಲಾಗಿರುತ್ತದೆ.

ಹೊಸ ತಾಲ್ಲೂಕು ಕೇಂದ್ರವಾಗಿರುವ ಯರಗಟ್ಟಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಸರಕಾರದ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಗ್ರಾಮದ ಪ್ರೌಢಶಾಲೆಯ ಕಂಪೌಂಡ್, ಬಣ್ಣ, ಶಾಲಾ ಮೈದಾನ ನಿರ್ಮಾಣ ಮಾಡಲಾಗಿರುತ್ತದೆ ಎಂದರು.

ಮುಗಳಿಹಾಳ-ಇಟ್ನಾಳರಸ್ತೆನಿರ್ಮಾಣಕ್ಕೆಪ್ರಸ್ತಾವನೆ:

ಮುಗಳಿಹಾಳ-ಇಟ್ನಾಳ ಗ್ರಾಮದ ಮಧ್ಯೆದ ಹೊಲಕ್ಕೆ ಹಾಗೂ ಶಾಲಾ ಮಕ್ಕಳಿಗೆ ದಾರಿ ಇಲ್ಲ ಎಂಬ ಮೊದಲ ಆಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, "ಗ್ರಾಮದ ನಕಾಶೆಯಲ್ಲಿ ರಸ್ತೆ ಇದ್ದರೆ ಕೂಡಲೇ ರಸ್ತೆಯನ್ನು ಮಾಡಿಕೊಡಲಾಗುವುದು. ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆಯನ್ನು ನೀಡಿದರು.

ಸಭೆಯಲ್ಲಿಯೇ ಗ್ರಾಮ‌ನಕಾಶೆ ತರಿಸಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, "ಸಣ್ಣ ನೀರಾವರಿ ಇಲಾಖೆಯ ವತಿಯಿಂದ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಡ್ಜ್-ಕಂ ಬ್ಯಾರೇಜ್ ನಿರ್ಮಾಣಕ್ಕೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಇದು ಅನುಮೋದನೆ ಆದ ನಂತರ ಕೂಡಲೇ ಕಾಮಗಾರಿ ಆರಂಭಿಸಲಾಗುವುದು" ಎಂದು ತಿಳಿಸಿದರು.

ಮುಗಳಿಹಾಳದಿಂದ ಇಟ್ನಾಳಕ್ಕೆ ಬಂಡಿ ದಾರಿ ಇತ್ತು. ದಾರಿಯಲ್ಲಿ ಕೆರೆ ನಿರ್ಮಾಣ ಮಾಡಿದ್ದರಿಂದ ರೈತರಿಗೆ ಹಾಗೂ ಶಾಲಾ ಮಕ್ಕಳಿಗೆ ‌ರಸ್ತೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ವಿವರಿಸಿದರು. ಸರಕಾರಿ ಕೆರೆಯ ನಡುವೆ ಮತ್ತೆ ರಸ್ತೆ ನಿರ್ಮಾಣ ಮಾಡಲು ಅವಕಾಶವಿಲ್ಲ; ಆದಾಗ್ಯೂ ಪರ್ಯಾಯ ಪರಿಹಾರ ಹುಡುಕಿ ಕೊಡಲಾಗುವುದು.

ಗ್ರಾಪಂಗ್ರಾಮಸಭೆಗೆದಿನಾಂಕನಿಗದಿ:

ಕಳೆದ ಎರಡು ವರ್ಷಗಳಿಂದ ಮುಗಳಿಹಾಳ ಗ್ರಾಮ ಪಂಚಾಯತಿ ಸಭೆಯನ್ನು ಕರೆದಿರುವುದಿಲ್ಲ. ಇದಕ್ಕೆ ಸಂಬಂಂಧಿಸಿದವರು ಉತ್ತರಿಸಬೇಕು ಎಂದು ಗ್ರಾಮಸ್ಥರೊಬ್ಬರು ಒತ್ತಾಯಿಸಿದರು.

ಗ್ರಾಮಸಭೆ ನಡೆಯದಿರುವುದರಿಂದ ಅನೇಕ ಕೆಲಸಕಾರ್ಯಗಳು ಬಾಕಿ ಉಳಿದಿರುತ್ತವೆ. ಆದ್ದರಿಂದ ಗ್ರಾಮಸಭೆ ನಡೆಸಬೇಕು ಎನ್ನುವುದು ಒಕ್ಕೊರಲಿನ ಆಗ್ರಹವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಈಗಾಗಲೇ ವಿಶೇಷ ಗ್ರಾಮಸಭೆಯನ್ನು ಮಾಡಲಾಗಿದ್ದು, ಸೆಪ್ಟೆಂಬರ್ ನಲ್ಲಿ ಗ್ರಾಮ ಸಭೆಯನ್ನು ಕರೆಯಲಾಗುವುದು ಎಂದು ಪಿಡಿಓ ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರೇ ಗ್ರಾಮ ಸಭೆಯ ದಿನಾಂಕವನ್ನು ನಿಗದಿಪಡಿಸಬೇಕು. ಅವರು ನೀಡಿದ ದಿನಾಂಕವೇ ಗ್ರಾಮಸಭೆಯನ್ನು ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪಾಟೀಲ ಸ್ಪಷ್ಟಪಡಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾನಿಂಗವ್ವ ಬಸಪ್ಪ ಮಾಯನ್ನಿ ಅವರು, ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23 ಕ್ಕೆ ಗ್ರಾಮ ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು.

ಅಂಗನವಾಡಿಕೇಂದ್ರ; ಸಮೀಕ್ಷೆಗೆಸೂಚನೆ:

ತೋಟಪಟ್ಟಿಯಲ್ಲಿ ಮಕ್ಕಳಿದ್ದರೆ ಅವರ ಸಂಖ್ಯೆಯನ್ನು ಆಧರಿಸಿ ಹೊಸ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಕೂಡಲೇ‌ ಸಮೀಕ್ಷೆ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲರಿಗೂಸೂರುಒದಗಿಸಲುಜಮೀನುಮಂಜೂರಾತಿ:

ಮುಗಳಿಹಾಳ ಗ್ರಾಮದ 90ಕ್ಕಿಂತ ಅಧಿಕ ಕುಟುಂಬಗಳಿಗೆ ನಿವೇಶನವಿರುವುದಿಲ್ಲ; ಅದೇ ರೀತಿ ಒಟ್ಟಾರೆ 344 ವಸತಿರಹಿತರಿಗೆ ಮನೆಯನ್ನು ಒದಗಿಸಲು ಅಗತ್ಯ ಜಮೀನನ್ನು ಗ್ರಾಮ ಪಂಚಾಯಿತಿಗೆ ಒದಗಿಸಲಾಗುವುದು. ನಂತರ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುವುದು ಎಂದರು.

ಮನೆಹಾನಿಯಾಗಿ ಎರಡು ವರ್ಷ ಕಳೆದರೂ ಕೊನೆಯ ಕಂತಿನ ಪರಿಹಾರ ದೊರಕಿರುವುದಿಲ್ಲ ಎಂದು ಹಿರಿಯರೊಬ್ಬರು ಜಿಲ್ಲಾಧಿಕಾರಿಗಳ ಗಮನಸೆಳೆದರು. ಈ ಬಗ್ಗೆ ತಹಶೀಲ್ದಾರರನ್ನು ವಿಚಾರಿಸಿದ ಜಿಲ್ಲಾಧಿಕಾರಿಗಳು, ಜಿಪಿಎಸ್ ಹಂತದಲ್ಲಿ ಅರ್ಜಿ ಇತ್ಯರ್ಥ ಬಾಕಿ ಉಳಿದಿದ್ದು, ಇಂದೇ ಅದನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.

ಸ್ಮಶಾನಭೂಮಿಅತಿಕ್ರಮಣತೆರವುಗೊಳಿಸಲುಸೂಚನೆ:

ಪಕ್ಕದ ದಾಸನಾಳ ಗ್ರಾಮದಲ್ಲಿ ಇರುವ 3 ಎಕರೆ ಸ್ಮಶಾನಭೂಮಿ ಅತಿಕ್ರಮಣಗೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ರಸ್ತೆ, ವಸತಿಸೌಲಭ್ಯ, ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಪರಿಹಾರ, ವಿದ್ಯುತ್ ಸಂಪರ್ಕ, ಅಂಗನವಾಡಿ ಕೇಂದ್ರ ಆರಂಭಿಸುವುದು, ಸ್ಮಶಾನಭೂಮಿ, ಅಕ್ರಮ ಸಾರಾಯಿ ಮಾರಾಟ ತಡೆ ಸೇರಿದಂತೆ ವಿವಿಧ ರೀತಿಯ ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು. ಮುಗಳಿಹಾಳ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಅಹವಾಲುಗಳನ್ನು ಸಲ್ಲಿಸಿದರು.

ತಹಶೀಲ್ದಾರ ಎಂ.ಎನ್.ಮಠದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾನಿಂಗವ್ವ ಬಸಪ್ಪ ಮಾಯನ್ನಿ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಗ್ರಾಪಂ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಗ್ರಾಮ ಪಂಚಾಯತಿ ಸದ್ಯರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ್ ಚಿತ್ತರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ವಿ.ಕರೀಕಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾಂಚನಾ ಆಮ್ಟೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

Read More Articles