ಗ್ರಾಮ ಪರಿಕ್ರಮ ಯಾತ್ರೆ: ರಾಷ್ಟ್ರೀಯ ಜಾಗೃತಿ ಮೂಡಿಸುವ ಉದ್ದೇಶ

ಬೆಳಗಾವಿ :ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಆಶಯದಂತೆ ಗ್ರಾಮ ಪರಿಕ್ರಮ ಯಾತ್ರೆ ಫೆಬ್ರವರಿ 12 ರಿಂದ ದೇಶದಾದ್ಯಂತ ಆರಂಭವಾಗಲಿದೆ.ಈ ಯಾತ್ರೆಯ ಮುಖ್ಯ ಉದ್ದೇಶಗಳು ಕೇಂದ್ರ ಸರ್ಕಾರದ ರೈತ ಕೇಂದ್ರಿತ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಗ್ರಾಮೀಣ ಜನರೊಂದಿಗೆ ಸಂಪರ್ಕ ಸಾಧಿಸುವುದು.

promotions

ಯಾತ್ರೆಯ ವಿವರಗಳು:

promotions
  • ಒಂದು ತಿಂಗಳ ಕಾಲ ಪ್ರತಿದಿನ ಪ್ರತಿ ಜಿಲ್ಲೆಯಲ್ಲಿ 5 ಗ್ರಾಮಗಳಲ್ಲಿ ನಡೆಯಲಿದೆ.
  • ಪ್ರತಿ ಜಿಲ್ಲೆಯಲ್ಲಿ 3 ಸಾವಿರ ರೈತರ ಪಾಲ್ಗೊಳ್ಳುವಿಕೆ ನಿರೀಕ್ಷಿತವಾಗಿದೆ.
  • ಕಾರ್ಯಕ್ರಮದ ಪ್ರಾರಂಭ ಗೋ ಮತ್ತು ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸುವ ಮೂಲಕ.
  • ಗ್ರಾಮದ ಹುತಾತ್ಮರಿಗೆ ಮಾಲೆ ಅರ್ಪಿಸಿ ಗೌರವಾರ್ಪಣೆ.
  • ರೈತ ಕೇಂದ್ರಿತ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು.
  • ಗ್ರಾಮೀಣ ಸಭೆಯಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಸಲಹೆಗಳಿಗೆ ಅವಕಾಶ.
  • ಮನೆ-ಮನೆ ಸಂಪರ್ಕದ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಕರಪತ್ರಗಳ ವಿತರಣೆ.

ಎಲ್ಲಾ ಹಂತದ ಜನಪ್ರತಿನಿಧಿಗಳು, ಮಂಡಲ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು, ನಿವೃತ್ತ ಅಧಿಕಾರಿಗಳು, ವಕೀಲರು, ವೈದ್ಯರು, ನಿವೃತ್ತ ಸೈನಿಕರು, ಹಿರಿಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಭಾಗವಹಿಸುವಿಕೆ.

ಬಿಜೆಪಿ ಮತ್ತು ಕಾಂಗ್ರೆಸ್ ಅವಧಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಕುರಿತ ತುಲನಾತ್ಮಕ ಅಂಶಗಳ ಚರ್ಚೆ. ಉದಾಹರಣೆಗೆ, ಕೃಷಿ ರಂಗದಲ್ಲಿನ  ಸಾಧನೆಗಳು, ರೈತರಿಗೆ ನೀಡಲಾದ ಬೆಂಬಲ, ಹೂಡಿಕೆ.

ಕೇಂದ್ರ ಸರ್ಕಾರದ ರೈತ ಕೇಂದ್ರಿತ ಯೋಜನೆಗಳ ಪ್ರಮುಖ ಅಂಶಗಳು

  1. ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡುವುದು.
  2. 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು.
  3. ಫಸಲ್ ಭೀಮಾ ಯೋಜನೆಯಡಿ 48 ಕೋಟಿ ಅರ್ಜಿಗಳಿಗೆ ₹1.04 ಲಕ್ಷ ಕೋಟಿ ನೇರ ನಗದು ಹಣ ವರ್ಗಾವಣೆ.
  4. ಕಿಸಾನ್ ಸಮ್ಮಾನ್ ಯೋಜನೆಯಡಿ 11.8 ಕೋಟಿ ರೈತರಿಗೆ ₹2.8 ಲಕ್ಷ ಕೋಟಿ ನೀಡಿಕೆ.
  5. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 2021 ರಿಂದ 2023 ರವರೆಗೆ ₹93,063 ಕೋಟಿ ನೀಡಿಕೆ.

Read More Articles