ನೋವಾಗಿ ರಾಜೀನಾಮೆ ನೀಡಿದ್ದೇನೆ 42 ವರ್ಷದಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ರಮೇಶ ಕತ್ತಿ

ಬೆಲ್ಲದ ಬಾಗೇವಾಡಿ : ನೋವಾಗಿ ರಾಜೀನಾಮೆ ನೀಡಿದ್ದೇನೆ 42 ವರ್ಷದಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸ್ವ- ಗ್ರಾಮದ ಬೆಲ್ಲದ ಬಾಗೇವಾಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ರಮೇಶ ಕತ್ತಿ 27 ವರ್ಷ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಬ್ಯಾಂಕಿನ‌ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಎಲ್ಲರ ಜೊತೆ ಚರ್ಚೆ ಮಾಡಿ ನಂತರ ರಾಜೀನಾಮೆ‌ ಕೊಟ್ಟಿದ್ದೇನೆ ಎಂದರು. 

promotions

ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ಇದ್ದೇವೆ. ಅವಿಶ್ವಾಸ ನಿರ್ಣಯದ ಕುರಿತು ಚರ್ಚೆ ಆಗಿಲ್ಲ ನನಗೆ 60 ವರ್ಷ ಆದ ಕಾರಣ ರಾಜೀನಾಮೆ ನೀಡಿದ್ದೇನೆ ಎಂದರು. 

promotions

ಯಾವ ನಿರ್ದೇಶಕರು ಕೂಡಾ ನನ್ನ ವಿರೋಧಿ ಕೆಲಸ ಮಾಡಿಲ್ಲ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ. 

promotions

ಹೊಸ ಸದಸ್ಯತ್ವ ಮಾಡುವ ವಿಚಾರದಲ್ಲಿ ಗೊಂದಲ‌ ನಿರ್ಮಾಣವಾಗಿದ್ದು ನಿಜ ಅದು ಅತಿರೇಕಕ್ಕೆ ಹೋದ ಕಾರಣ ರಾಜಕಾರಣದ ಒತ್ತಡದಿಂದ ನಾನೇ ನಿರ್ಧಾರ ಮಾಡಿದ್ದೇನೆ ಎಂದರು. 

ಸದಸ್ಯತ್ವ ಮಾಡುವ ಕುರಿತು ಅಂತಿಮ ಹಂತಕ್ಕೆ ಬರದ ಕಾರಣ ರಾಜೀನಾಮೆ ನೀಡಿದ್ದೇ‌‌ನೆ ಈ 42 ವರ್ಷದಲ್ಲಿ ನನ್ನ ಕಡೆನೂ ತಪ್ಪಾಗಿದ್ದರೂ ಅದು ಬ್ಯಾಂಕಿನ ಹಿತದೃಷ್ಟಿಯಿಂದ ಮಾಡಿರಬಹದು ತಪ್ಪಿನಿಂದ ನೋವಿದ್ದರೇ ವಿಷಾಧ ವ್ಯಕ್ತಪಡಿಸುತ್ತೇನೆ ಎಂದರು. 

ಬ್ಯಾಂಕ್ ಸದೃಡವಾಗಿದೆ ಯಾರು ಕೂಡಾ ನನ್ನ ರಾಜೀನಾಮೆಯಿಂದ ಇಟ್ಟಂಥ ಠೇವು ಹಣವನ್ನು ವಾಪಸ್ಸ ಪಡೆಯದಂತೆ ಮನವಿ ಮಾಡಿದರು.

Read More Articles