ರೈತರ ಮೇಲೆ ದಬ್ಬಾಳಿಕೆ ಮಾಡಿದ ಎಲ್ ಆ್ಯಂಡ್ ಟಿ ಫೈನಾನ್ಸ್ ವಿರುದ್ಧ ಕನ್ನಡ ಸಂಘಟನೆ ಆಕ್ರೋಶ
- 15 Jan 2024 , 1:35 AM
- Belagavi
- 234
ಬೆಳಗಾವಿ: ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಎಲ್ ಆ್ಯಂಡ್ ಟಿ ಫೈನಾನ್ಸ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಕೊಲ್ಲಾಪುರ ವೃತ್ತದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಜು ಚವ್ಹಾಣ ಎಂಬ ರೈತ ಟ್ಯಾಕ್ಟರ್ ಖರೀದಿಗಾಗಿ ಎಲ್ ಆ್ಯಂಡ್ ಟಿ ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಂಡಿದ್ದರು. ಎಲ್ಲಾ ಕಂತುಗಳನ್ನು ತುಂಬಿದ ಮೇಲಿಯೂ ಫೈನಾನ್ಸ್ ನವರು ರೈತನ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಹೆಚ್ಚುವರಿ ಹಣ ತುಂಬುವಂತೆ ಪೀಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಶಿವರಡ್ಡಿ ಹುಚ್ಚರಡ್ಡಿ, ಮಲ್ಲಪ್ಪ ಕಾಂಬಳೆ, ರವಿ ಹಡಪದ, ರೇಣುಕಾ ಜಾಲಿಮರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










