ಕೃಷ್ಣೆಯ ರೌದ್ರಾವತಾರ: ನದಿ ತೀರದ ಹಳ್ಳಿಗಳಲ್ಲಿ ಹೆಚ್ಚಿದ ಆತಂಕ

ಬೆಳಗಾವಿ:ಜಿಲ್ಲೆಯಲ್ಲಿ ಭಾರಿ ಮಳೆಯ ಪರಿಣಾಮ, ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ನೆರೆ ಭೀತಿ ಉಂಟಾಗಿದೆ. ಮಹಾರಾಷ್ಟ್ರದ ಅಣೆಕಟ್ಟುಗಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ನದಿಯು ಗರಿಷ್ಠ ಮಟ್ಟವನ್ನು ತಲುಪಿದೆ.

promotions

ನದಿಯು ಈಗಾಗಲೇ ಜುಗುಳ, ಮಂಗವತಿ, ಶೇಡಬಾಳ, ಯಡೂರು ಸೇರಿದಂತೆ ಹಲವಾರು ಹಳ್ಳಿಗಳ ಕೃಷಿ ಭೂಮಿಗಳನ್ನು ಪ್ರವೇಶಿಸಿದೆ. ಹಳ್ಳಿಗಾರರು ತಮ್ಮ ಮನೆಗಳು ಮತ್ತು ಪಶುಸಂಗೋಪನೆಯನ್ನು ರಕ್ಷಿಸಲು ತೊಡಗಿದ್ದಾರೆ.

promotions
ನೆರೆ ಬರುವ ಸಂಭವ ಇದೆ ಎಂದು ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ. ಪ್ರತಿ ವರ್ಷ, ನಾವು ಬೆಳೆಗಳು ಮತ್ತು ಮನೆಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುತ್ತೇವೆ ಎಂದು ದುಃಖ ವ್ಯಕ್ತ ಪಡಿಸಿದ್ದಾರೆ.

ಸರ್ಕಾರ ಜನತೆಗೆ ಎಚ್ಚರಿಕೆ ಮತ್ತು ಸುರಕ್ಷಾ ಕ್ರಮಗಳನ್ನು ಪಾಲಿಸಲು ಸಲಹೆ ನೀಡಿದ್ದು, ಜಿಲ್ಲಾಧಿಕಾರಿಗಳು ಈಗಾಗಲೇ ನದಿ ಪಾತ್ರದ ಗ್ರಾಮಗಳಿಗೆ ಭೇಟಿನೀಡಿ ಪರಿಸ್ಥಿತಿ ವೀಕ್ಷಿಸಿದ್ದಾರೆ.

Read More Articles