ಅಲೌಕಿಕ ಧ್ಯಾನ ಮಂದಿರದಿಂದ ಕೆಎಸ್ಎಂಎಪ್ ಅಧ್ಯಕ್ಷರಿಗೆ ಗೌರವ ಸನ್ಮಾನ
- 14 Jan 2024 , 11:32 PM
- Belagavi
- 180
ಬೆಳಗಾವಿ : ಕರ್ನಾಟಕ ರಾಜ್ಯ ಬಿಸಿಊಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಬೆಂಗಳೂರು ಇದರ ಅಧ್ಯಕ್ಷರಾಗಿ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಯ್ಕೆಯಾಗಿರುವುದು ನಮಗೆ ಅತಿವ ಸಂತೋಷ ತಂದಿದೆ ಕರ್ನಾಟಕದ ತುಂಬೆಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬೆಳಗಿನ ಹಾಲು ಬಾಳೆಹನ್ನು ಚೆಕ್ಕೆ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇವೆ.

ಈ ಕಾರ್ಯದಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ 51 ಎನ ಜಿ ಓ ಗಳು ಕಾರ್ಯವನ್ನು ನಿರ್ವಹಿಸುತ್ತಿವೆ ಹತ್ತು ಲಕ್ಷ ಮಕ್ಕಳಿಗೆ ಬಿಸಿಯೂಟ ಸರಬರಾಜನ್ನು ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯ ವಿಶೇಷವಾಗಿ ಇರುವಂತದ್ದು ಇವುಗಳು ವ್ಯವಸ್ಥಿತವಾಗಿ ಕಾರ್ಯವನ್ನು ನಿರ್ವಹಿಸಲಿ ಎನ್ನುವ ದೃಷ್ಟಿಕೋನದಿಂದ ಕೆ ಎಸ್ ಎಂ ಎಫ್ ನ ಅಧ್ಯಕ್ಷರಾಗಿ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಗಳು ಆಯ್ಕೆಯಾಗಿರುವುದು ಅಭಿನಂದನಿಯ ಶ್ರೀಗಳ ನೇತೃತ್ವದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಯೋಜನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿ ಎಂದು ಬೆಳಗಾವಿ ಸಮೇಪದ ನಿಲಜಿ ಅಲೌಕಿಕ ಧ್ಯಾನ ಮಂದಿರದ ಶ್ರೀ ಶಿವಾನಂದ ಗುರುಜಿಯವರು ಶ್ರೀಗಳನ್ನು ಸನ್ಮಾನಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಅನ್ನದಾನ ಶ್ರೇಷ್ಠ ದಾನ ಇದನ್ನು ಸರಕಾರ ನಮಗೆ ಮಾಡಲು ಜವಾಬ್ದಾರಿಯನ್ನು ನೀಡಿದೆ ನಾವೆಲ್ಲರೂ ಕೂಡ ಅಚ್ಚುಕಟ್ಟಾಗಿ ಬಿಸಿಯೂಟವನ್ನ ಮಕ್ಕಳಿಗೆ ತಲುಪಿಸಿ ಎಲ್ಲಾ ಕಾರ್ಯಗಳಲ್ಲಿ ಬದ್ಧತೆಯಿಂದ ಕಾರ್ಯವನ್ನು ನಿರ್ವಹಿಸಿ ಬಿಸಿಊಟದ ಸಿದ್ಧತೆಯನ್ನ ಮಾಡಿ ಜಾಗ್ರತೆಯಿಂದ ಮುಟ್ಟಿಸುವ ಕೆಲಸವನ್ನು ಎಲ್ಲರೂ ಮಾಡುತ್ತಿದ್ದಾರೆ ಇನ್ನೂ ಅಚ್ಚುಕಟ್ಟಾಗಿ ಮಾಡಲಿ ಎನ್ನುವ ಸದಾಶಯವು ಕೂಡ ನಮ್ಮದಾಗಿದೆ.
ಸರಕಾರದ ಅಧಿಕಾರಿಗಳ ಶಿಕ್ಷಕರ ಮತ್ತು ಪಾಲಕರ ಸಹಕಾರ ಇ ಬಿಸಿಯೂಟ ಯೋಜನೆ ಯಶಸ್ವಿಯಾಗಿ ನಡೆಯಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಗಳ ಉತ್ತರಾಧಿಕಾರಿಯಾದ ಶಿವಾತ್ಮಾನಂದ ಗುರುಜಿ ಉಪಸ್ಥಿತರಿದ್ದರು










